twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಪತ್ರೆಯಿಂದ ಸೀದಾ ಸೆಂಟ್ರಲ್ ಜೈಲ್‌ಗೆ ದರ್ಶನ್

    By Rajendra
    |

    ಕಳೆದ 11 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಚೇತರಿಸಿಕೊಂಡಿರುವ ದರ್ಶನ್‌ರನ್ನು ಬುಧವಾರ (ಸೆ.21) ಆಸ್ಪತ್ರೆಯಿಂದ ಬಿಡುಗಡೆ ಮಾಡಲಿದ್ದಾರೆ. ಇಲ್ಲಿಂದ ಬಿಡುಗಡೆಯಾಗಲಿರುವ ದರ್ಶನ್‌ರನ್ನು ಸೆಂಟ್ರಲ್ ಜೈಲಿಗೆ ಕಳುಹಿಸಲಾಗುತ್ತದೆ.

    ದರ್ಶನ್ ಸಂಪೂರ್ಣ ಗುಣಮುಖರಾಗಿದ್ದು ನಾಳೆ ಅವರನ್ನು ಡಿಸ್ಚಾರ್ಚ್ ಮಾಡಲಾಗುತ್ತದೆ ಎಂದು ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಶಶಿಧರ ಬುಗ್ಗಿ ತಿಳಿಸಿದ್ದಾರೆ. ದರ್ಶನ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದ್ದು, ಮಂಗಳವಾರ (ಸೆ.20) ರಾತ್ರಿಯಿಂದ ಅವರಿಗೆ ಔಷಧೋಪಚಾರನ್ನು ನಿಲ್ಲಿಸಲಿದ್ದೇವೆ ಎಂದು ಬುಗ್ಗಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

    ಪತ್ನಿ ಮೇಲೆ ಹಲ್ಲೆ ಮಾಡಿದ ಪ್ರಕರಣ ಎದುರಿಸುತ್ತಿರುವ ದರ್ಶನ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ ಮೇಲೆ ಅವರ ಆರೋಗ್ಯದಲ್ಲಿ ದಿಢೀರ್ ಎಂದು ಕೈಕೊಟ್ಟಿತ್ತು. ಕೇವಲ ಒಂದಷ್ಟು ಗಂಟೆಗಳನ್ನು ಮಾತ್ರ ಜೈಲಿನಲ್ಲಿ ಕಳೆದಿದ್ದ ದರ್ಶನ್ ಅನಾರೋಗ್ಯದ ನಿಮಿತ್ತ ಬಹುತೇಕ ಸಮಯವನ್ನು ಆಸ್ಪತ್ರೆಯಲ್ಲಿ ಕಳೆದಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Kannada actor Darshan, who was arrested on the charge of beating up his wife Vijayalakshmi. Doctors attending on the accused actor at the Rajiv Gandhi Institute of Chest Diseases (RGICD) have decided to discharge on 22nd Wednesday.
    Tuesday, September 20, 2011, 18:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X