Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂನಿಯರ್ ಎನ್ಟಿಆರ್ ವರದಕ್ಷಿಣೆ 500 ಕೋಟಿ!
ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಮದುವೆಯಾಗುತ್ತಿರುವ ಸುದ್ದಿ ಗೊತ್ತೆ ಇದೆ. ಲಕ್ಷ್ಮಿ ಪ್ರಶಾಂತಿ ಎಂಬ ಕನ್ಯೆಯನ್ನು ಜೂನಿಯರ್ ಎನ್ಟಿಆರ್ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಸುದ್ದಿ ಇದಲ್ಲ. ಹೊಸ ಸುದ್ದಿ ಏನಪ್ಪಾ ಅಂದ್ರೆ, ಈ ಮದುವೆಗೆ ಜೂನಿಯರ್ ಎನ್ಟಿಆರ್ ತೆಗೆದುಕೊಳ್ಳುತ್ತಿರುವ ವರದಕ್ಷಿಣೆ ಬರೋಬ್ಬರಿ ರು.500 ಕೋಟಿಗಳು!
ಸುದ್ದಿ ಮೂಲಗಳ ಪ್ರಕಾರ ಜೂನಿಯರ್ ಎನ್ಟಿಆರ್ ಈಗಾಗಲೇ ರು.500 ಕೋಟಿಯನ್ನು ಭಾವಿ ಅತ್ತೆಮಾವಂದಿರಿಂದ ಮುಂಗಡವಾಗಿ ಪಡೆದಿದ್ದಾರಂತೆ. ಲಕ್ಷ್ಮಿ ಪ್ರಶಾಂತಿ ಅವರೊಂದಿಗೆ ಜೂನಿಯರ್ ಎನ್ಟಿಆರ್ ಈಗಾಗಲೇ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಇನ್ನೇನಿದ್ದರೂ ಮಂಗಳವಾದ್ಯಗಳು ಮೊಳಗುವುದಷ್ಟೇ ಬಾಕಿ ಇದೆ.
ನರ್ನೆ ಶ್ರೀನಿವಾಸ ರಾವ್ ಮತ್ತು ನರ್ನೆ ಮಲ್ಲಿಕಾ ಅವರ ಮಗಳು ಲಕ್ಷ್ಮಿ ಪ್ರಶಾಂತಿ. ತೆಲುಗು ದೇಶಂ ಪಕ್ಷದ ಅಧ್ಯಕ್ಷ ನಾರಾ ಚಂದ್ರಬಾಬು ನಾಯ್ಡು ಅವರ ಸೋದರ ಸೊಸೆಯೆ ನರ್ನೆ ಮಲ್ಲಿಕಾ. ಇನ್ನೂ ಹದಿನೆಂಟರ ಹರಿಯದ ಲಕ್ಷ್ಮಿ ಪ್ರಶಾಂತಿ ಹೈದರಾಬಾದಿನ ಖಾಸಗಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಓದುತ್ತಿದ್ದಾರೆ.
ಲಕ್ಷ್ಮಿ ಪ್ರಶಾಂತಿ ಇನ್ನೂ ಅಪ್ರಾಪ್ತ ಬಾಲಕಿಯಾಗಿರುವ ಕಾರಣ ಆಕೆಯ ಮದುವೆ ಕಾನೂನು ಬಾಹಿರವಾಗುತ್ತದೆ ಎಂದು ಶಾಂತಿ ಪ್ರಸಾದ್ ಎಂಬ ವಕೀಲರೊಬ್ಬರು ಈ ಹಿಂದೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮಚಲಿಪಟ್ಟಣಂ ಲೀಗಲ್ ಸರ್ವಿಸ್ ಅಥಾರಿಟಿಯಲ್ಲಿ ದಾವಾ ಹೂಡಿದ್ದರು.
ಈ ಸಂಬಂಧ ಪ್ರಾಧಿಕಾರ ಜೂನಿಯರ್ ಎನ್ಟಿಆರ್ ಸೇರಿದಂತೆ ಚಂದ್ರಬಾಬು ನಾಯ್ಡು, ಹುಡುಗಿಯ ತಂದೆ ನರ್ನೆ ಶ್ರೀನಿವಾಸ ರಾವ್ ಅವರಿಗೆ ನೊಟೀಸ್ ಜಾರಿ ಮಾಡಿತ್ತು. ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಮುಂದಾಡಲಾಗಿದೆ. ಪರಿಸ್ಥಿತಿ ಹೀಗಿದ್ದರೂ ಜೂನಿಯರ್ ಎನ್ಟಿಆರ್ ಮದುವೆ ಮೇ ತಿಂಗಳಲ್ಲಿ ನಡೆಯುವುದು ಶತಸ್ಸಿದ್ಧ ಎನ್ನುತ್ತವೆ ಮೂಲಗಳು.