twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೆ ಲೀಲಾವತಿ-ವಿನೋದ್ ರಾಜ್ ತೋಟಕ್ಕೆ ಬೆಂಕಿ

    |

    Leelavathi Vinodraj
    ಹಿರಿಯ ಚಿತ್ರನಟಿ ಲೀಲಾವತಿಯವರ ನೆಲಮಂಗಲ ತಾಲೂಕಿನ ಸೋಲದೇವನ ಹಳ್ಳಿಯಲ್ಲಿರುವ ತೋಟಕ್ಕೆ ನಿನ್ನೆ ಮಧ್ಯಾಹ್ನ ಆಕಸ್ಮಿಕ ಬೆಂಕಿ ಬಿದ್ದದೆ. ತೋಟದಲ್ಲಿನ ಕೆಲವು ಮರಗಳು ಸುಟ್ಟು ಕರಕಲಾದ ಘಟನೆ ನಡೆದಿದೆ. ತೋಟದ ಅಂಚಿನಲ್ಲಿದ್ದ ಮರಗಳಿಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ನಟ, ಲೀಲಾವತಿ ಮಗ ವಿನೋದ್ ರಾಜ್ ತಮ್ಮ ರೈತಕಾರ್ಮಿಕರ ಜೊತೆ ಸೇರಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಆಗಬಹುದಾಗಿದ್ದ ಅವಘಡ ತಪ್ಪಿದೆ.

    ನಟಿ ಲೀಲಾವತಿಯವ ಪಕ್ಕದ ಜಮೀನಿನ ಮಾಲೀಕ ಮಂಜುನಾಥ ಅವರ ಜಮೀನಿಗೆ ಹೊತ್ತಿಕೊಂಡ ಬೆಂಕಿ, ಇವರ ತೋಟಕ್ಕೂ ಹರಡಿದೆ ಎನ್ನಲಾಗಿದೆ. ಅವರ ತೋಟದಲ್ಲಿ ಬೆಳೆಗಳು ಇಲ್ಲದ ಕಾರಣ, ನಷ್ಟವೇನೂ ಹೆಚ್ಚಾಗಿ ಆಗಿಲ್ಲ. ಆದರೆ ನಟಿ ಲೀಲಾವತಿ ತೋಟದಲ್ಲಿ ಸಾಕಷ್ಟು ಬೆಳೆ ಹಾಗೂ ಮರಗಳು ಅಗ್ನಿಗಾಹುತಿಯಾಗಿವೆ. ವಿಷಯ ತಿಳಿದ ಸ್ಥಳೀಯ ಅಗ್ನಿಶಾಮಕ ದಳ ತಕ್ಷಣ ಅಲ್ಲಿ ಆಗಮಿಸಿತ್ತು.

    ಕಳೆದ ಒಂದು ವರ್ಷದ ಹಿಂದೆ ಅದೇ ತಾಲೂಕಿನ ಮೈಲಹಳ್ಳಿ ಗ್ರಾಮದಲ್ಲಿರುವ ಅವರ ಇನ್ನೊಂದು ತೋಟಕ್ಕೂ ಬೆಂಕಿ ಬಿದ್ದಿತ್ತು. ಆ ಘಟನೆ ಹಳೆಯದಾಗುವ ಮುನ್ನವೇ ಮತ್ತೊಂದು ಘಟನೆ ಜರುಗಿದೆ. ಇದೊಂದು ಆಕಸ್ಮಿಕವೇ ಅಥವಾ ಕಿಡಿಗೇಡಿಗಳ ಕೃತ್ಯವೇ ಎಂಬುದು ತಿಳಿದುಬಂದಿಲ್ಲ. ಸ್ಥಳೀಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)

    English summary
    Actress Leelavathi Form House got fire by accidentally. Actor and her son Vinod Raj has taken immediate action on that and extinguish the fire. 
 
    Monday, February 20, 2012, 9:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X