Don't Miss!
- News ಬೆಂಗಳೂರಿನಲ್ಲಿ 647 ಎಕರೆಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಕೆಐಎಡಿಬಿ ಯೋಜನೆ
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಕ್ಸ್ ಆಫೀಸ್ ಸುಲ್ತಾನ್ ಈಗ 'ದಾಖಲೆವೀರ'
ದರ್ಶನ್ ಅಥವಾ ಅವರಂಥ ಯಾವದೇ ದೊಡ್ಡ ಸ್ಟಾರನ್ನು ಹಾಕಿಕೊಂಡರೂ ಚಿತ್ರವೊಂದು 30 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಸಂಪಾದನೆ ಮಾಡುವುದು ಸದ್ಯದ ಮಟ್ಟಿಗೆ ಕನ್ನಡದಲ್ಲಿ ಕಷ್ಟವೇ. ಐತಿಹಾಸಿಕ ಚಿತ್ರದಲ್ಲಿ ಮಸಾಲೆ ಚಿತ್ರಗಳ ಸ್ಟಾರ್ ದರ್ಶನ್ ಕಾಣಿಸಿಕೊಂಡರೆ ಗೆಲುವು ಸಾಧ್ಯವೇ? ಆದರೆ ಇದನ್ನೆಲ್ಲ ಮೀರಿ ನಿಲ್ಲುವ ಲೆಕ್ಕಾಚಾರ ನಿರ್ಮಾಪಕ ಆನಂದ್ ಅಪ್ಪುಗೋಳ್ ತಲೆಯಲ್ಲಿ ಮೊದಲೇ ನಡೆದಿರಬೇಕು.
ಇಲ್ಲದಿದ್ದರೆ ಅವರ ಇಂತಹ ಸಾಹಸಕ್ಕೆ ಕೈಹಾಕುತ್ತಿರಲಿಲ್ಲ. ಅವರ ಸಾಹಸಕ್ಕೆ ಉತ್ತೇಜನ ಸಿಕ್ಕಂತೆ ಇದೀಗ ಟಿವಿ ಹಕ್ಕುಗಳು ಭಾರೀ ಮೊತ್ತಕ್ಕೆ ಬಿಕರಿಯಾಗಿದೆ. ಆಡಿಯೋ ಹಕ್ಕುಗಳು 64 ಲಕ್ಷ ರೂಪಾಯಿಗಳಿಗೆ ಅಶ್ವಿನಿ ಆಡಿಯೋ ಪಾಲಾಗಿದೆ. ಈ ಹಿಂದೆ ಯೋಗರಾಜ್ ಭಟ್ ನಿರ್ದೇಶನ, ಪುನೀತ್ ನಾಯಕನಾಗಿದ್ದ 'ಪರಮಾತ್ಮ' ಚಿತ್ರದ ಆಡಿಯೋ ಹಕ್ಕುಗಳನ್ನು 77 ಲಕ್ಷ ರೂಪಾಯಿಗಳಿಗೆ ಇದೇ ಅಶ್ವಿನಿ ಸಂಸ್ಥೆ ಖರೀದಿಸಿತ್ತು.
ಪುನೀತ್ ಇನ್ನೊಂದು ಚಿತ್ರ 'ಅಣ್ಣಾಬಾಂಡ್' ಆ ದಾಖಲೆಗಳನ್ನೆಲ್ಲ ಹಿಂದೆ ಸರಿಸಿತ್ತು. ಈಗ ಅಣ್ಣಾಬಾಂಡ್ ಸನಿಹಕ್ಕೆ 'ಸಂಗೊಳ್ಳಿ ರಾಯಣ್ಣ' ಕೂಡ ತಲುಪಿದ್ದಾನೆ ಎನ್ನಲಾಗುತ್ತಿದೆ. ಏನೇ ಆಗಲಿ, ಸಂಗೊಳ್ಳಿ ರಾಯಣ್ಣನ ಮೇಲೆ ಭರವಸೆಯಿಟ್ಟು ಅಪಾರ ದುಡ್ಡು ಸುರುದಿದ್ದಾರೆ ನಿರ್ಮಾಪಕ ಆನಂದ್ ಅಪ್ಪುಗೋಳ್. ಅವರು ಗೆಲುವು ಖಂಡಿತ ಎನ್ನಲಾಗುತ್ತಿದೆ. ಕಾರಣ ಈಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ್. (ಒನ್ ಇಂಡಿಯಾ ಕನ್ನಡ)