Don't Miss!
- News ತುಷ್ಟೀಕರಣ ರಾಜಕೀಯಕ್ಕೆ ಮುಸ್ಲೀಮರಿಗೆ ಮೀಸಲಾತಿಗೆ ಕಾಂಗ್ರೆಸ್ ಬೆಂಬಲ: ಬಸವರಾಜ ಬೊಮ್ಮಾಯಿ ಕಿಡಿ
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಮತ್ತು ಹಳೆ ತಲೆಮಾರಿನ ಕೊಂಡಿ ಸಿನಿಗಂಧ
ಸಿನಿಮಾ ಇತಿಹಾಸ ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ಕಾಲಂಗಳ ಮೂಲಕ ಹೇಳಹೊರಟಿರುವ ಸಿನಿಗಂಧ,ಓದುಗ ಪ್ರಿಯರನ್ನು ಅತೀ ಕಡಿಮೆ ಅವಧಿಯಲ್ಲೇ ಆಕರ್ಷಿಸಿದೆ.ಜೊತೆಗೆ ಅತ್ಯಾಕರ್ಷಕ ಕಾರ್ಟೂನ್ ಗಳು, ಕಾಮಿಕ್ಸ್ ಗಳು, ಚಿಕ್ಕಮಕ್ಕಳಿಂದ ಹಿಡಿದು, ವೃದ್ಧರನ್ನೂ ಸೆಳೆದಿದೆ!
ನಟಿ ಸರೀತಾ ಜೀವನ ಕಥನ, ವಿಷ್ಣು ದ್ವಾರಕೀಶ್ ಕದನ ಕಥನ,ತೊಗಲುಗೊಂಬೆಯ ಆಟದ ಮೂಲಕ ಚಿತ್ರವಿಮರ್ಶೆ ಹೇಳುವ ಕಾಲಂ.. ಹೀಗೆ ಪ್ರತಿಯೊಂದೂ ವಿ-ಭಿನ್ನ, ವಿ-ನೋದ, ವಿ-ಚಿತ್ರ. ಮೂರನೇ ಸಂಚಿಕೆ ಇನ್ನೇನು ಮಾರುಕಟ್ಟೆಗೆ ಬರಲಿದೆ. ರಾಕ್ ಲೈನ್ ವೆಂಕಟೇಶ್, ಯೋಗರಾಜ್ ಭಟ್, ಎಚ್ ಎಂ ರಾಮಚಂದ್ರ, ಸುಮನಾ ಕಿತ್ತೂರು, ಬಿ ಸುರೇಶ್, ಕೋಮಲ್, ದೀಪಕ್ ಸಾಗರ ಮತ್ತಿತ್ತರ ಮಿತ್ರರು ಸಂಪಾದಕೀಯ ಸಲಹಾ ಮಂಡಳಿಯಲ್ಲಿದ್ದಾರೆ.
ಶಂಕರನಾಗ್ ಜೀವದ ಗೆಳೆಯ ಮತ್ತು ಹತ್ತಿರದ ಒಡನಾಡಿ ಮನದೀಪ್ ರೈ ಅವರ ಎಕ್ಸ್ ಕ್ಲೂಸೀವ್ ಸಂದರ್ಶನ ಮೂಡಿಬರಲಿದೆ! ಜೊತೆಗೆ 25 ಆಟೋ ಡ್ರೈವರ್ ಗಳು ಶಂಕರಣ್ಣನ ಬಗ್ಗೆ ತಮಗೆ ಗೊತ್ತಿರುವ ವಿಶೇಷ ಮಾಹಿತಿ ನೀಡಲಿದ್ದಾರೆ! ನಿರೀಕ್ಷಿಸಿ. ಸಿನಿಗಂಧ ಪತ್ರಿಯ ವೆಬ್ಸೈಟ್ಗೆ ದಾರಿ ಇಲ್ಲಿದೆ.
ವೈಚಾರಿಕ ಹಿನ್ನೆಲೆಯ ವಿಷಯಗಳನ್ನು ಪಂಚಿಂಗ್ ಮತ್ತು ಸರಳ ಭಾಷೆಯಲ್ಲಿ ಬರೆದು, ಹೊಚ್ಚ ಹೊಸ ಕಾಲಂಗಳಿಗೆ ಒಂದು ಮ್ಯಾಗಜಿನ್ ಕೊಟ್ಟ ಪತ್ರಕರ್ತ ವಿನಾಯಕರಾಮ್ ಈ ಸಿನಿಗಂಧ ಪತ್ರಿಕೆಯ ಸಂಪಾದಕ. ವಿಭಿನ್ನ ವಿನೋದ ವಿಚಿತ್ರ ಎಂಬುದು ಪತ್ರಿಕೆಯ ಧ್ಯೇಯವಾಕ್ಯ. ಪ್ರತಿ ಸಂಚಿಕೆಯೂ ವಿಭಿನ್ನ, ವಿಚಿತ್ರ, ವಿನೋದ.
ವಿಜಯಕರ್ನಾಟಕದಲ್ಲಿ ಒಂದಷ್ಟು ವರ್ಷ ಇದ್ದು, ಸಿನಿಮಾ ಬರವಣಿಗೆಗೆ ವಿ-ಚಿತ್ರ ರೂಪ ಕೊಟ್ಟು ಅದರಿಂದ ಓದುಗ ಬಳಸಿಕೊಂಡ ಅವರ ಅದೆಷ್ಟೋ ಚಿತ್ರ ವಿಮರ್ಶೆಗಳು ಚಿತ್ರ ವಿಮರ್ಶೆಗಳು ದಟ್ಸ್ ಕನ್ನಡದಲ್ಲೂ ಪ್ರಕಟವಾಗಿತ್ತು. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕಾಲಂ ಬರೆಯುತ್ತಿರುವ ಅವರು, ಸಿನಿ ಸುದ್ದಿಗಳನ್ನೂ ಸಂಪಾದಿಸುವ ಕೆಲಸ ಮಾಡುತ್ತಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)