Don't Miss!
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆ ಮಂಜು, ಉಪೇಂದ್ರ ಸಂಧಾನ ಬಹಿಷ್ಕರಿಸಿದ್ದು ಯಾಕೆ?
ಗಾಡ್ ಫಾದರ್ ಚಿತ್ರದ ನಿರ್ಮಾಪಕ ಕೆ ಮಂಜು ಉಪೇಂದ್ರರ ಮಾತನ್ನು ಧಿಕ್ಕರಿಸಿ ಸಂಧಾನ ಸಭೆಯನ್ನೇ ಬಹಿಷ್ಕರಿಸಿ ಹೊರನಡೆದ ಘಟನೆ ಎಲ್ಲರಿಗೂ ಗೊತ್ತಿದೆ. ಆದರೆ ಹಾಗೆ ಹೋಗಿದ್ದಕ್ಕೆ ಕಾರಣವೇನು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಸಂಧಾನದ ಸಂದರ್ಭದಲ್ಲಿ ಉಪೇಂದ್ರ, ಗಾಡ್ ಫಾದರ್ ಚಿತ್ರವನ್ನು ಕಠಾರಿವೀರ ನಂತರ ಬಿಡುಗಡೆ ಮಾಡಿ ಎಂದು ಮಂಜುರಿಗೆ ಸಲಹೆ ನೀಡಿದ್ದರಂತೆ. ಅದಕ್ಕೆ ಕೆಂಡಮಂಡಲವಾಗಿ ಮಂಜು ಹೊರನಡೆದರಂತೆ.
ಅದೇ ರೀತಿ ಮುನಿರತ್ನರ ಮನವೊಲಿಸಲೂ ಕೂಡ ಉಪೇಂದ್ರ ಪ್ರಯತ್ನಿಸಿದ್ದಾರೆ. ಆದರೆ ಮುನಿರತ್ನ ಪಟ್ಟೂ ಸಡಿಲಿಸಲಿಲ್ಲ, ಉಪ್ಪಿ ಮಾತನ್ನೂ ಕೇಳಲಿಲ್ಲ. ಆದರೆ ಮಂಜು ಮಾತ್ರ ಉಪೇಂದ್ರ ಮಾತಿಗೆ ವಾಗ್ವಾದ ನಡೆಸಿ ಸಭೆಯನ್ನೇ ಬಹಿಷ್ಕರಿಸಿ ಹೊರನಡೆದದ್ದು ಅಲ್ಲಿದ್ದ ಎಲ್ಲರಿಗೂ ಮುಜುಗರವ ಉಂಟುಮಾಡಿದೆ. ಕಾರಣ, ಸಂಧಾನಕ್ಕಾಗಿ ಮಂಜು ಹಾಗೂ ಮನಿರತ್ನ ಅವರುಗಳೇ ವಿದೇಶದಲ್ಲಿ ಚಿತ್ರೀಕರಣದಲ್ಲಿದ್ದ ಉಪೇಂದ್ರರನ್ನು ಮನೆಗೆ ಕರೆಸಿಕೊಂಡಿದ್ದು.
ಇದೀಗ ಉಪೇಂದ್ರ ಮನೆಯಲ್ಲಿ ನಡೆದ ಸಂಧಾನ ವಿಫಲವಾದ ನಂತರ ನಿರ್ಮಾಪಕರಿಬ್ಬರೂ ಅಂಬರೀಷ್ ಮನೆ ಕಡೆ ಹೋಗುವ ನಿರ್ಧಾರ ಮಾಡಿದ್ದಾರೆ. ಆದರೆ ಸಂಧಾನ ನಡೆಸಲು ಅಂಬಿ ಒಪ್ಪುತ್ತಾರೋ, ಸಮಸ್ಯೆ ಬಗೆ ಹರಿಯುತ್ತೋ ಎನ್ನುವುದು ಸದ್ಯಕ್ಕೆ ಯಕ್ಷ ಪ್ರಶ್ನೆಯೇ! ಒಟ್ಟಿನಲ್ಲಿ ಉಪೇಂದ್ರರ ಮಾತನ್ನು ಧಿಕ್ಕರಿಸುವಷ್ಟು ಧೈರ್ಯ ಮಂಜುಗೆ ಬಂದಿದ್ದು ಎಲ್ಲಿಂದ ಎಂದಿ ಇಡೀ ಗಾಂದಿನಗರ ಮಾತನಾಡುತ್ತಿದೆ. (ಒನ್ ಇಂಡಿಯಾ ಕನ್ನಡ)