Don't Miss!
- News ಸ್ಟಾರ್ ಪ್ರಚಾರಕರ ಜೊತೆ ವೇದಿಕೆ ಹಂಚಿಕೊಂಡರೆ ವೆಚ್ಚ ಅಭ್ಯರ್ಥಿ ಖಾತೆಗೆ
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Technology SmartGlass: ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್ ಬಳಕೆದಾರರು ಇನ್ಮುಂದೆ ವಿಡಿಯೋ ಕಾಲ್ ಮಾಡಬಹುದು!
- Automobiles ಕ್ರ್ಯಾಶ್ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ ಮಧ್ಯಮ ವರ್ಗದ ಮೆಚ್ಚಿನ ಸ್ವದೇಶಿ ಕಾರು
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹ್ಯಾಟ್ರಿಕ್ ಹೀರೋಗೆ ಒಲಿಯಿತು ಅಶ್ವಿನಿ ರಾಂ 'ಪ್ರಸಾದ'
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ 'ಮೈಲಾರಿ' ಶೀರ್ಷಿಕೆ ವಿವಾದ ಕಡೆಗೂ ಸುಖಾಂತ್ಯ ಕಂಡಿದೆ. 'ಮೈಲಾರಿ' ಶೀರ್ಷಿಕೆ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರ ಪಾಲಾಗಿರುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ತಿಳಿಸಿದ್ದಾರೆ.
'ಮೈಲಾರಿ' ಎಂಬ ಒಂದೇ ಶೀರ್ಷಿಕೆಯನ್ನು ಇಬ್ಬರು ನಿರ್ಮಾಪಕರು ನೋಂದಾಯಿಸಿಕೊಂಡ ಕಾರಣ ಶೀರ್ಷಿಕೆ ವಿವಾದ ತಲೆದೋರಿತ್ತು. ಮೈಲಾರಿ ಶೀರ್ಷಿಕೆಯನ್ನು ಮೊದಲು ನೋಂದಾಯಿಸಿಕೊಂಡವರು ಅಶ್ವಿನಿ ರಾಂ ಪ್ರಸಾದ್. ಬಳಿಕ ಇದೇ ಶೀರ್ಷಿಕೆಯನ್ನು ತಾಜ್ ಮಹಲ್ ಚಂದ್ರು ನೋಂದಾಯಿಸಿಕೊಂಡಿದ್ದರು.
ಚಿತ್ರದ ಶೀರ್ಷಿಕೆಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟುಹಿಡಿದಿದ್ದ ರಾಂ ಪ್ರಸಾದ್ 'ಮೈಲಾರಿ' ಶೀರ್ಷಿಕೆಯಲ್ಲಿ ತಾವೇ ಚಿತ್ರವನ್ನು ನಿರ್ಮಿಸುವುದಾಗಿ ಹೇಳಿಕೊಂಡಿದ್ದರು. ನನ್ನ ಅನುಮತಿ ಇಲ್ಲದೆ ಮೈಲಾರಿ ಶೀರ್ಷಿಕೆಯನ್ನು ಬಳಸಿಕೊಂಡಿದ್ದಾರೆ ಎಂದು ಅಶ್ವಿನಿ ರಾಂ ಪ್ರಸಾದ್ ಛೇಂಬರ್ ಮೆಟ್ಟಿಲು ಹತ್ತಿದ್ದರು.ಇದೆಲ್ಲದರ ಪರಿಣಾಮವಾಗಿ 'ಮೈಲಾರಿ' ಶೀರ್ಷಿಕೆಯನ್ನು ಪತ್ರಿಕೆಯ ಜಾಹೀರಾತುಗಳಲ್ಲಿ ಬಳಸುವಂತಿಲ್ಲ ಎಂದು ಮಂಡಳಿ ತಾಕೀತು ಮಾಡಿತ್ತು.
ಕಡೆಗೆ 'ಮೈಲಾರಿ' ಶೀರ್ಷಿಕೆ ಶಿವಣ್ಣನ ಪಾಲಾಗಿದೆ. ಈ ಸಂಬಂಧ ಅಶ್ವಿನಿ ರಾಂ ಪ್ರಸಾದ್ ಮಾತನಾಡುತ್ತಾ, ಈ ಶೀರ್ಷಿಕೆಯಲ್ಲೆ ಸಿನಿಮಾ ಮಾಡಬೇಕೆಂದು ಆಶಿಸಿದ್ದೆ. ಆದರೆ ಶೀರ್ಷಿಕೆ ಬಿಟ್ಟು ಕೊಡುವಂತೆ ನನ್ನ ಸಹೋದರ ಸಾಕಷ್ಟು ವಿನಂತಿಸಿಕೊಂಡ. ಆ ಕಾರಣಕ್ಕೆ ನಾನು ಶೀರ್ಷಿಕೆಯನ್ನು ಬಿಟ್ಟುಕೊಟ್ಟಿದ್ದೇನೆ. ಮುಂದೆ ಇದಕ್ಕಿಂತಲೂ ಉತ್ತಮ ಶೀರ್ಷಿಕೆ ಸಿಗಬಹುದು ಎಂಬ ಆಶಾಭಾವವನ್ನು ಅವರು ವ್ಯಕ್ತಪಡಿಸಿದ್ದಾರೆ. ಅಂದಹಾಗೆ 'ಮೈಲಾರಿ' ಶಿವರಾಜ್ ಕುಮಾರ್ ಅವರ 99ನೇ ಚಿತ್ರ.