Don't Miss!
- Technology ಜಿಯೋ ನಿವ್ವಳ ಲಾಭದಲ್ಲಿ ಭರ್ಜರಿ ಹೆಚ್ಚಳ: ಇಲ್ಲಿದೆ ವಿವರ
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Finance ಬೆಂಗಳೂರಿಗೆ ಪ್ರತ್ಯೇಕ ನ್ಯಾವಿಗೇಟಿಂಗ್ ಅಪ್ಲಿಕೇಶನ್, ಟೆಕ್ ಕಂಪೆನಿಯೊಂದಿಗೆ ಒಪ್ಪಂದ
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿ ಸುರೇಶನ ಕನಸು ಪ್ರಕಾಶವಾಯಿತಾ?
ಪ್ರಕಾಶ್ ರೈ ನಿರ್ದೇಶಿಸಿ ನಟಿಸಿರುವ 'ನಾನು ನನ್ನ ಕನಸು' ಚಿತ್ರವನ್ನು ಇನ್ನೂ ನೋಡಿಲ್ಲವೆ? ಹಾಗಿದ್ದರೆ ಇಲ್ಲಿದೆ ನೋಡಿ ಒಂದು ಸುವರ್ಣಾವಕಾಶ. ಕೇವಲ ಚಿತ್ರ ನೋಡುವುದಷ್ಟೆ ಅಲ್ಲ ಅದರ ಸಂತಸ-ದುಃಖ, ಓರೆ-ಕೋರೆ, ಸಕ್ಸ್ ಸ್-ಫೇಲ್ಯೂರ್ ಗಳನ್ನು ಚಿತ್ರತಂಡದೊಂದಿಗೆ ಹಂಚಿಕೊಂಡು ಸಂವಾದ ಮಾಡಬಹುದು. ಕನ್ನಡ ಚಿತ್ರಗಳ ಬೆಳವಣಿಗೆಗೆ ಅಳಿಲು ಸೇವೆ ಸಲ್ಲಿಸುತ್ತಿರುವ ಸಂವಾದ ಡಾಟ್ ಕಾಂ 'ನಾನು ನನ್ನ ಕನಸು' ಸಂವಾದ ಮತ್ತು ಪ್ರದರ್ಶನವನ್ನು ಏರ್ಪಡಿಸಿದೆ.
ಇದೇ ಭಾನುವಾರ (ಮೇ.23) ಸಂವಾದ ಹಾಗೂ ಚಿತ್ರ ಪ್ರದರ್ಶನವಿರುತ್ತದೆ. ಕೆಂಪೇಗೌಡ ರಸ್ತೆಯ ಭೂಮಿಕಾ ಚಿತ್ರಮಂದಿರ ನಿಮಗಾಗಿ ಮ್ಯಾಟಿನಿ ಪ್ರದರ್ಶನಕ್ಕೆ ಸ್ವಾಗತ ಕೋರುತ್ತದೆ. ಚಿತ್ರ ಪ್ರದರ್ಶನದ ಬಳಿಕ ಅಂದು ಸಂಜೆ ಆರು ಗಂಟೆಗೆ ಚರ್ಚೆ ನಡೆಯಲಿದೆ. ಸಂವಾದಲ್ಲಿ ಪ್ರಕಾಶ್ ರೈ, ಬಿ ಸುರೇಶ್, ರಾಜೇಶ್, ಅನಂತ್ ಅರಸ್, ಅಮೂಲ್ಯ ಮತ್ತು ಲಭ್ಯವಿರುವ ಇತರೆ ತಾಂತ್ರಿಕ ವರ್ಗದವರು ಪಾಲ್ಗೊಳ್ಳಲಿದ್ದಾರೆ.
ಮುಂಗಡವಾಗಿ ನಿಮ್ಮ ಸ್ಥಳವನ್ನು ಕಾದಿರಿಸಲು, ಸಂವಾದ ಹಾಗೂ ಪ್ರದರ್ಶನ ವಿವರಗಳಿಗೆ www.samvaada.com/events ಪುಟಕ್ಕೆ ಭೇಟಿ ಕೊಡಿ ಅಥವಾ ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು. ಕಿರಣ್( 97317 55966), ಅರೇಹಳ್ಳಿ ರವಿ (99004 39930). ಸಂವಾದ ತಂಡದೊಂದಿಗೆ ಅವಿರತ ಬಳಗ ಸಹ ಕೈಜೋಡಿಸಿದೆ.