Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿ ಸುರೇಶನ ಕನಸು ಪ್ರಕಾಶವಾಯಿತಾ?
ಪ್ರಕಾಶ್ ರೈ ನಿರ್ದೇಶಿಸಿ ನಟಿಸಿರುವ 'ನಾನು ನನ್ನ ಕನಸು' ಚಿತ್ರವನ್ನು ಇನ್ನೂ ನೋಡಿಲ್ಲವೆ? ಹಾಗಿದ್ದರೆ ಇಲ್ಲಿದೆ ನೋಡಿ ಒಂದು ಸುವರ್ಣಾವಕಾಶ. ಕೇವಲ ಚಿತ್ರ ನೋಡುವುದಷ್ಟೆ ಅಲ್ಲ ಅದರ ಸಂತಸ-ದುಃಖ, ಓರೆ-ಕೋರೆ, ಸಕ್ಸ್ ಸ್-ಫೇಲ್ಯೂರ್ ಗಳನ್ನು ಚಿತ್ರತಂಡದೊಂದಿಗೆ ಹಂಚಿಕೊಂಡು ಸಂವಾದ ಮಾಡಬಹುದು. ಕನ್ನಡ ಚಿತ್ರಗಳ ಬೆಳವಣಿಗೆಗೆ ಅಳಿಲು ಸೇವೆ ಸಲ್ಲಿಸುತ್ತಿರುವ ಸಂವಾದ ಡಾಟ್ ಕಾಂ 'ನಾನು ನನ್ನ ಕನಸು' ಸಂವಾದ ಮತ್ತು ಪ್ರದರ್ಶನವನ್ನು ಏರ್ಪಡಿಸಿದೆ.
ಇದೇ ಭಾನುವಾರ (ಮೇ.23) ಸಂವಾದ ಹಾಗೂ ಚಿತ್ರ ಪ್ರದರ್ಶನವಿರುತ್ತದೆ. ಕೆಂಪೇಗೌಡ ರಸ್ತೆಯ ಭೂಮಿಕಾ ಚಿತ್ರಮಂದಿರ ನಿಮಗಾಗಿ ಮ್ಯಾಟಿನಿ ಪ್ರದರ್ಶನಕ್ಕೆ ಸ್ವಾಗತ ಕೋರುತ್ತದೆ. ಚಿತ್ರ ಪ್ರದರ್ಶನದ ಬಳಿಕ ಅಂದು ಸಂಜೆ ಆರು ಗಂಟೆಗೆ ಚರ್ಚೆ ನಡೆಯಲಿದೆ. ಸಂವಾದಲ್ಲಿ ಪ್ರಕಾಶ್ ರೈ, ಬಿ ಸುರೇಶ್, ರಾಜೇಶ್, ಅನಂತ್ ಅರಸ್, ಅಮೂಲ್ಯ ಮತ್ತು ಲಭ್ಯವಿರುವ ಇತರೆ ತಾಂತ್ರಿಕ ವರ್ಗದವರು ಪಾಲ್ಗೊಳ್ಳಲಿದ್ದಾರೆ.
ಮುಂಗಡವಾಗಿ ನಿಮ್ಮ ಸ್ಥಳವನ್ನು ಕಾದಿರಿಸಲು, ಸಂವಾದ ಹಾಗೂ ಪ್ರದರ್ಶನ ವಿವರಗಳಿಗೆ www.samvaada.com/events ಪುಟಕ್ಕೆ ಭೇಟಿ ಕೊಡಿ ಅಥವಾ ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು. ಕಿರಣ್( 97317 55966), ಅರೇಹಳ್ಳಿ ರವಿ (99004 39930). ಸಂವಾದ ತಂಡದೊಂದಿಗೆ ಅವಿರತ ಬಳಗ ಸಹ ಕೈಜೋಡಿಸಿದೆ.