Don't Miss!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಭು ಸಿಕ್ಕರೂ ನಯನತಾರಾ ಹಿಂದೂ ಆಗೋಲ್ವಂತೆ!
ಮೈಸೂರು ಮೂಗುರು ಸುಂದರಂ ಫ್ಯಾಮಿಲಿ ನೋಡಿದ್ರೆ ಹದಿನಾರಾಣೆ ಹಿಂದೂ ದೈವ ಭಕ್ತ ಕುಟುಂಬ. ಆದರೆ, ನಯನತಾರಾ ಮಾತ್ರ ಹಿಂದೂ ದೇವರಿಗೆ ಬೇಕಾದರೆ ಬಾಗಿಲಿಂದ ಕೈ ಮುಗಿಯುತ್ತೇನೆ. ಜಪ್ಪಯ್ಯ ಅಂದ್ರೂ ಮತಾಂತರ ಆಗುವುದಿಲ್ಲ ಎಂದಿದ್ದಾಳೆ.
ಕೇರಳ ಕಟ್ಟಾ ಕ್ಯಾಥೋಲಿಕ್ ಕುಟುಂಬದಿಂದ ಬಂದಿರುವ ನಯನತಾರಾಗೆ ಕ್ರೈಸ್ತ ಮತದ ಬಗ್ಗೆ ಎಲ್ಲಿಲ್ಲದ ಅಭಿಮಾನ. ಮದುವೆಗೊಸ್ಕರ ಹಿಂದೂ ಆಗಲು ನಾನು ತಯಾರಿಲ್ಲ. ಈ ಬಗ್ಗೆ ಪ್ರಭುದೇವ ಹೇಳಿದರೂ ಕೇಳಲ್ಲ. ಅವರನ್ನು ಸಂಭಾಳಿಸುವುದು ನನಗೆ ಗೊತ್ತಿದೆ. ಮದುವೆ ನಂತರ ಹಿಂದೂವಾಗುತ್ತೇನೆ ಎಂಬುದೆಲ್ಲಾ ಗಾಳಿಸುದ್ದಿ ಎಂದು ನಯನತಾರಾ ಹೇಳಿದ್ದಾಳೆ.
ಮದುವೆಗೆ ನಮಗಿಂತ ಮಾಧ್ಯಮದವರಿಗೆ ಹೆಚ್ಚು ಅವಸರ ಎಂದು ತೋರುತ್ತದೆ. ಮದುವೆ ನಮ್ಮ ಖಾಸಗಿ ವಿಷ್ಯ ಎಂದಿದ್ದಾರೆ. ಗುರುವಾಯೂರು ಶ್ರೀಕೃಷ್ಣ ಮಂದಿರಕ್ಕೆ ನಟ ಪ್ರಭುದೇವ ಹಾಗೂ ನಟಿ ನಯನತಾರಾ ಹೋಗಿದ್ದಾಗ, ಅನ್ಯಧರ್ಮೀಯಳೆಂದು ನಯನತಾರಾಗೆ ಮಂದಿರದೊಳಗೆ ಪ್ರವೇಶ ನಿರಾಕರಿಸಲಾಗಿತ್ತು.
ಈ ಮಧ್ಯೆ ಚಿತ್ರರಂಗ ತೊರೆಯುವ ಮಾತನಾಡಿದ್ದ ನಯನತಾರಾ ಅಳು ಪ್ರಸಂಗ ಕೂಡಾ ಈಗ ನಗೆಪಾಟಲಾಗಿದ್ದು, ನಟಿಮಣಿ ಮತ್ತೆ ಬಣ್ಣ ಹಚ್ಚುವುದಾಗಿ ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ.