Don't Miss!
- News Everest Fish Curry Masala: ಎವರೆಸ್ಟ್ ಫಿಶ್ ಕರಿ ಮಸಾಲೆ ಬ್ಯಾನ್: ಕಾರಣ ಇಲ್ಲಿದೆ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ನಿರ್ದೇಶಕರೆಲ್ಲಾ ಅಡ್ಡಕಸುಬಿಗಳು: ರಾಜೇಂದ್ರ ಸಿಂಗ್ ಬಾಬು
ಗಾಂಧಿನಗರದಲ್ಲಿ
ಈಗ
ಮೇಕರ್ಸ್
ಅಂತ
ನಾಲ್ಕೇ
ಜನ
ಇದ್ವಿ.
ಈಗ
ನೀನು
ಸೇರಿಕೊಂಡಿದೀಯ
ರಂಗನಾಥ್.
ಭಟ್ಟ
(ಯೋಗರಾಜ್),
ಸೂರಿ,
ನಾನು,
ಪ್ರೀತು
(ಪ್ರೀತಮ್
ಗುಬ್ಬಿ),
ನೀನು...
ಈಗ
ನಿರ್ದೇಶಕರು
ಅಂತ
ಇರೋದೇ
ಇಷ್ಟು:
ನಾಗಶೇಖರ
(ಗುಲಾಮ
ಚಿತ್ರ
ಬಿಡುಗಡೆಯಾದ
ನಂತರ
ರಂಗನಾಥ್
ಜೊತೆ
ನಡೆಸಿದ
ಸಂಭಾಷಣೆ).
ಕನ್ನಡ
ಸಿನಿಮಾ
ದೊಡ್ಡ
ಕ್ರೈಸಿಸ್ನಲ್ಲಿರುವ
ಈ
ಕಾಲಮಾನದಲ್ಲಿ
ಭರವಸೆ
ಇಡಬಹುದಾದ
ನಿರ್ದೇಶಕರು
ಆಡಿರುವ
ಮಾತುಗಳಿವು.
ರಾಜೇಂದ್ರ
ಸಿಂಗ್
ಬಾಬು
ಈಗ
ಕನಸು
ಕಟ್ಟಲು
ಹೆಣಗಾಡುತ್ತಿರುವವರು.
ಶಶಾಂಕ್
ನಿರ್ದೇಶಿಸಿರುವುದು
ಎರಡೇ
ಸಿನಿಮಾ.
ಮೊಗ್ಗಿನ
ಮನಸ್ಸು"
ಲಾಸು
ಅಂತ
ನಿರ್ಮಾಪಕ
ಇ.ಕೃಷ್ಣಪ್ಪ
ಹೇಳಿಕೊಂಡು
ಓಡಾಡುತ್ತಿದ್ದಾರೆ.
ಇನ್ನು
ನಾಗಶೇಖರ
ಅರಮನೆ"
ನಂತರ
ಇನ್ನೊಂದು
ಚಿತ್ರವನ್ನೇ
ನಿರ್ದೇಶಿಸಿಲ್ಲ.
ಅರಮನೆ"
ಸದಭಿರುಚಿಯ
ಸಿನಿಮಾ
ಆದರೂ
ಅದನ್ನು
ನೂರು
ದಿನ
ತಳ್ಳಿ
ನೂಕಿ
ಓಡಿಸಿದ್ದು
ಎಂಬುದು
ಗುಟ್ಟೇನೂ
ಅಲ್ಲ.
ಗಣೇಶನ
ಆಣತಿಯ
ಮೇರೆಗೆ
ನೂರು
ದಿನದ
ಸಮಾರಂಭ
ಮಾಡಿ
ನಿರ್ಮಾಪಕ
ಕೆ.ಮಂಜು
ಮುಖ
ಕಿವುಚಿಕೊಂಡಿದ್ದು
ಗೊತ್ತೇ
ಇದೆ!
ಕನ್ನಡ
ಚಿತ್ರರಂಗದಲ್ಲಿ
ಈಗ
ಕೊರತೆ
ಇರುವುದು
ಕುಸುರಿ
ಕೆಲಸ
ಗೊತ್ತಿರುವ
ನಿರ್ದೇಶಕರದ್ದು.
ನಾಯಕ,
ನಾಯಕಿಯರಾಗುವ
ಮುಖಗಳು
ಅಸಂಖ್ಯ.
ಸಂಗೀತ
ನಿರ್ದೇಶಕರ
ಫಸಲೂ
ಚೆನ್ನಾಗೇ
ಇದೆ.
ಅಂಥಾದರಲ್ಲಿ
ಹೊಸಬರೆಲ್ಲಾ
ಅಡ್ಡಕಸುಬಿಗಳು
ಅನ್ನುವ
ಸಿಂಗ್
ಬಾಬು
ಜನರಲೈಸ್ಡ್
ಮಾತು,
ಐದೇ
ಜನ
ನಿರ್ದೇಶಕರು
ಎನ್ನುವ
ನಾಗಶೇಖರನ
ಅಧಿಕ
ಪ್ರಸಂಗಿತನ
ಎರಡೂ
ಹುಂಬತನದ
ಪರಾಕಾಷ್ಠೆ.
ನಿರ್ದೇಶಕನ ಯೋಚನೆ ಕ್ರಿಯೇಟಿವಿಟಿ ಕುರಿತೇ ಇರಬೇಕು. ಆ ಕಾರಣಕ್ಕೆ ಸೂರಿ, ಯೋಗರಾಜ್ ಭಟ್ಟರ ನಡುವೆ ಜಗಳವಾದರೆ ಸಂತೋಷ. ಆದರೆ, ಹಣದ ಕಾರಣಕ್ಕೆ ಆಗುತ್ತದಲ್ಲ ಅದು ದುರಂತ. ತಾನೊಬ್ಬನೇ ಸ್ಟಾರ್ ಅನ್ನುವಂತೆ ನಗುತ್ತಿದ್ದ ಗಣೇಶ ಏನಾಗುತ್ತಿದ್ದಾನೆ, ನೋಡಿ. ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು ಅನ್ನೋ ಮಾತನ್ನು ಇವರಿಗೆ ಯಾರಾದರೂ ಮನದಟ್ಟು ಮಾಡಿಸಬೇಕಲ್ಲ.
ಪೂರಕ
ಓದಿಗೆ
ಯುವ ನಿರ್ದೇಶಕರುಗಳಿಗೆ ಒಂದು ಪತ್ರವು...