Don't Miss!
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಾರ್ಮಿನಾರ್ ನಲ್ಲಿ ಅಜಯ್ ರಾವ್, ಚಂದ್ರು ಭೇಟಿ
ಅಜಯ್ ರಾವ್, ಪೂಜಾ ಗಾಂಧಿ ಸಂಗಮದಲ್ಲಿ 'ತಾಜ್ ಮಹಲ್' ಚಿತ್ರ ಮಾಡಿ ಗೆದ್ದಿದ್ದರು ಚಂದ್ರು. ಆದರೆ ನಂತರ ಅದೇ ಅಜಯ್ ಹಾಕೊಕೊಂಡು 'ಪ್ರೇಮಹ ಕಹಾನಿ' ಮಾಡಿ ಸೋತಿದ್ದರು. ಆಗ ಅಜಯ್ ಹಾಗೂ ಚಂದ್ರು ಪರಸ್ಪರ ಮಾಧ್ಯಮದ ಮುಂದೆ ಒಬ್ಬರನ್ನೊಬ್ಬರು ದೂರಿಕೊಂಡಿದ್ದರು. ಆದರೆ ಈಗ ಮತ್ತೆ ಒಂದಾಗುತ್ತಿದ್ದಾರೆ.
ಹೌದು, ಸದ್ಯದಲ್ಲೇ ಅಜಯ್ ರಾವ್ ಗಾಗಿ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ ಚಂದ್ರು. ಅದಕ್ಕೆ 'ಚಾರ್ಮಿನಾರ್' ಎಂದು ಹೆಸರೂ ಇಟ್ಟಾಗಿದೆ. ಇದೂ ಕೂಡ ತಾಜ್ ಮಹಲ್ ಚಿತ್ರದಂತೆ ಲವ್ ಸಬ್ಜೆಕ್ಟ್ ಹೊಂದಿದೆ. ಕೋ ಕೋ ಚಿತ್ರವನ್ನು ಮಾಡಿ ಹೆಸರು ಕೆಡಿಸಿಕೊಂಡ ಚಂದ್ರು ಇದೀಗ ಮತ್ತೆ ಲವ್ ಸ್ಟೋರಿಗೇ ಮೊರೆ ಹೋಗಿದ್ದಾರೆ.
ಒಟ್ಟಿನಲ್ಲಿ ಕೋ ಕೋ ಚಿತ್ರವನ್ನು ಚಂದ್ರು ಚೆನ್ನಾಗಿ ಮಾಡಿಲ್ಲವೆಂದು ಪ್ರೇಕ್ಷಕವರ್ಗ ಹಾಗೂ ವಿಮರ್ಶಕರು ಚಂದ್ರು ಅವರನ್ನು ದೂರಿದ್ದರು. ಇದೀಗ ಮತ್ತೆ ತಾಜ್ ಮಹಲ್ ತರಹದ ಪ್ರೇಮ ಪುರಾಣವನ್ನು ತೆರೆಗೆ ತರಲಿದ್ದಾರೆ ಆರ್ ಚಂದ್ರು. ಅವರಿಗೆ ಜೊತೆಯಾಗಲಿದ್ದಾರೆ ಮತ್ತದೇ ಅಜಯ್ ರಾವ್. ಈ ಬಾರಿಯಾದರೂ ಚಂದ್ರು ಪ್ರೇಕ್ಷಕರಿಗೆ ಮೋಸ ಮಾಡದಿರಲಿ ಎನ್ನುತ್ತಿದೆ ಗಾಂಧಿನಗರ. (ಒನ್ ಇಂಡಿಯಾ ಕನ್ನಡ)