ತಿರುಪತಿ ತಿಮ್ಮಪ್ಪನಿಗೆ ನಟ ರಜನಿಕಾಂತ್ ತುಲಾಭಾರ ಸೇವೆ
ಸೂಪರ್ ಸ್ಟಾರ್ ರಜನಿಕಾಂತ್ ಬುಧವಾರ (ಅ.19) ತಮ್ಮ ಕುಟುಂಬ ಸಮೇತ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಭಾಗ್ಯ ಪಡೆದರು. ಈ ಸಂದರ್ಭದಲ್ಲಿ ಅವರು ತಿಮ್ಮಪ್ಪನಿಗೆ ತುಲಾಭಾರ ಸೇವೆಯನ್ನೂ ಮಾಡಿ ಪುನೀತರಾದರು.
ಇವರ ಜೊತೆಗೆ ತೆಲುಗು ನಟ ಹಾಗೂ ಅವರ ಗೆಳೆಯ ಮೋಹನ್ ಬಾಬು ಕೂಡ ಇದ್ದರು. ರಜನಿಕಾಂತ್ ಅವರು ತಿರುಪತಿ ತಿಮ್ಮಪ್ಪನ ಪರಮಭಕ್ತ. 75 ಕೆಜಿ ಸಕ್ಕರೆಯನ್ನು ತುಲಾಭಾರ ಸೇವೆ ಮೂಲಕ ದೇವರಿಗೆ ಸಮರ್ಪಿಸಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಅವರು ತಿಮ್ಮಪ್ಪನ ಸಾನಿಧ್ಯದಲ್ಲಿ ಕಳೆದದ್ದು ವಿಶೇಷ.
ಮೇ ತಿಂಗಳಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು. ಗುಣಮುಖರಾದ ಮೇಲೆ ತಿಮ್ಮಪ್ಪನ ದರ್ಶನ ಭಾಗ್ಯ ಪಡೆಯುವುವಾಗಿ ರಜನಿ ಬೇಡಿಕೊಂಡಿದ್ದರು. ಅದರಂತೆ ಅವರು ಬುಧವಾರ ತಿರುಪತಿ ಆಗಮಿಸಿದ್ದರು. ಜೊತೆ ಅವರ ಧರ್ಮಪತ್ನಿ ಲತಾ ರಜನಿಕಾಂತ್, ಪುತ್ರಿಯರಾದ ಐಶ್ವರ್ಯ ಹಾಗೂ ಸೌಂದರ್ಯ ಕೂಡ ಜೊತೆಗಿದ್ದರು. (ಏಜೆನ್ಸೀಸ್)
More from Filmibeat
English summary
Rajinikanth along with his family members and Telugu actor Mohan Babu visited Tirumala yesterday. The Endhiran star, who is an ardent devotee of the Lord Venkateshwara, offered Thulabaram at the temple.


Click it and Unblock the Notifications











