Don't Miss!
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- News Heavy Rain: ರಣಭೀಕರ ಮಳೆಗೆ ರಾಷ್ಟ್ರೀಯ ಹೆದ್ದಾರಿ ಇಬ್ಭಾಗ: ಭೂಕುಸಿತದಿಂದ ರಸ್ತೆ ಸಂಪರ್ಕ ಬಂದ್-ಎಲ್ಲಿ?
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದ್ವಾರಕೀಶ್ ಕನಸುಗಳಲ್ಲಿ ಐಶ್ವರ್ಯಾ ರೈ !
ಸಿನಿಮಾದಲ್ಲಿ ಅಪ್ರಸ್ತುತರಾಗಿ ಮರೆಗೆ ಸರಿದರು ಎನ್ನುವಾಗಲೇ, ಕನ್ನಡ ನಾಡು ವೇದಿಕೆಯ ಮೂಲಕ ದ್ವಾರಕೀಶ್ ರಾಜಕೀಯಕ್ಕೆ ಜಿಗಿದರು. ಹುಣಸೂರು ವಿಧಾನಸಭಾ ಆಭ್ಯರ್ಥಿಯಾಗಿ ಜನರ ಮನಗೆಲ್ಲಲಾಗದೇ ಸುಸ್ತಾದರು. ಮತ್ತೆ ಬಣ್ಣದ ಪ್ರಪಂಚಕ್ಕೆ 'ಆಪ್ತಮಿತ್ರ" ಚಿತ್ರದೊಂದಿಗೆ ಪ್ರವೇಶ ಪಡೆದರು. ಕಳ್ಳ-ಕುಳ್ಳ ಜೋಡಿ ಮತ್ತೆ ಒಂದಾಯಿತು. ವಿಷ್ಣುವರ್ಧನ್-ಸೌಂದರ್ಯ ಜೋಡಿಯ ಆಪ್ತಮಿತ್ರ ಇನ್ನೇನು ಬಿಡುಗಡೆಗೆ ಸಿದ್ಧ . ಆದರೆ ಈ ಸುದ್ದಿ ಆಪ್ತಮಿತ್ರನಿಗೆ ಸಂಬಂಧಿಸಿದ್ದಲ್ಲ , ಕಳ್ಳರಿಗೆ ಸಂಬಂಧಿಸಿದ್ದು .
ಆಪ್ತಮಿತ್ರ ಬಿಡುಗಡೆಗೆ ಮೊದಲೇ 'ಆಲಿಬಾಬಾ ಮತ್ತು ನಲವತ್ತು ಜನ ಕಳ್ಳರು" ಎನ್ನುವ ತಮ್ಮ ಮಹತ್ವಾಕಾಂಕ್ಷೆಯ ಚಿತ್ರ ಸೆಟ್ಟೇರಿಸುವ ಚಿಂತನೆಯಲ್ಲಿ ದ್ವಾರಕೀಶ್ ಮುಳುಗಿದ್ದಾರೆ. ಮಕ್ಕಳಿಂದ ಮುದುಕರವರೆಗೆ ಇಂದಿಗೂ ಆಕರ್ಷಣೆ ಉಳಿಸಿಕೊಂಡಿರುವ ಈ ಕತೆಯನ್ನು ಸಿನಿಮಾ ಮಾಡುವ ದ್ವಾರ್ಕಿ ಕನಸು ಇಂದಿನದಲ್ಲ. ರಾಜ್ಕುಮಾರ್ರನ್ನು ಹಾಕಿಕೊಂಡು ಚಿತ್ರ ಮಾಡಬೇಕು ಆಂದುಕೊಂಡಿದ್ದರಂತೆ. ಆಮೇಲೆ ವಿಷ್ಣುವರ್ಧನ್-ಶ್ರೀದೇವಿ ಜೋಡಿಯನ್ನು ಹಾಕಿಕೊಂಡು ಚಿತ್ರ ಮಾಡಲು ಯೋಚಿಸಿದ್ದರೂ ಆಗ ಕೈಗೂಡಿರಲಿಲ್ಲ. ಕನಸು ಮತ್ತೆ ಚಿಗುರಿದ್ದು ಈಗ.
ಗಾಂಧಿನಗರದ ಮೂಲಗಳ ಪ್ರಕಾರ- ಆಲಿಬಾಬಾದಲ್ಲಿ ನಟಿಸಲು ಉಪೇಂದ್ರ ಮನಸ್ಸು ಮಾಡಿದ್ದಾರೆ. ನಾಯಕಿಯಾಗಿ ಸುರಸುಂದರಿ ಐಶ್ವರ್ಯ ರೈ ಚಿತ್ರ ದ್ವಾರಕೀಶ್ ಕಣ್ಣಲ್ಲಿದೆ. ಈಕೆ ಹ್ಞೂಂ ಅಂತಾಳಾ ಅನ್ನೋದು ಬೇರೆ ಪ್ರಶ್ನೆ .
ಕನ್ನಡ ಮಾತ್ರವಲ್ಲದೆ 'ಆಲಿಬಾಬಾ ಮತ್ತು ನಲವತ್ತು ಜನ ಕಳ್ಳರು" ಚಿತ್ರವನ್ನು ತೆಲುಗು, ಇಂಗ್ಲಿಷ್ನಲ್ಲೂ ನಿರ್ಮಿಸುವ- ಜಪಾನ್, ರಷ್ಯಾ, ಇಟಲಿ ಮತ್ತಿತರ ದೇಶಗಳಲ್ಲಿ ಚಿತ್ರ ಪ್ರದರ್ಶಿಸುವ ಐಡಿಯಾ ದ್ವಾರಕೀಶ್ ಅವರದು. ಚಿತ್ರದ ಬಜೆಟ್ ಎಷ್ಟು ? ಈ ಬಗ್ಗೆ ದ್ವಾರಕೀಶರದು ಡೋಂಟ್ಕೇರ್ ಪಾಲಿಸಿ. ದ್ವಾರಕೀಶ್ ಹೇಳೋದು ಇಷ್ಟೇ- ದೃಶ್ಯ ಮಾಧ್ಯಮದ ಅಪಾರ ಸಾಧ್ಯತೆಗಳನ್ನು ಬಳಸಿಕೊಂಡು ಅನ್ನ ನೀಡಿದ ಅಭಿಮಾನಿ ದೇವರುಗಳಿಗೆ ಅತ್ಯುತ್ತಮ ಚಿತ್ರ ನೀಡುವುದು ನನ್ನ ಕರ್ತವ್ಯ. ಭಲೇ ಕುಳ್ಳ ದ್ವಾರಕೀಶ್ಗೆ ಬೆಸ್ಟ್ ಆಫ್ ಲಕ್ ಅನ್ನೋಣ.