Don't Miss!
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Automobiles Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2009-10ನೇ ಸಾಲಿನ ಚಲನಚಿತ್ರ ಪ್ರಶಸ್ತಿ ವಾಪಸ್
2009-10 ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಪೈಕಿ ಪುನೀತ್ ರಾಜ್ ಕುಮಾರ್ ಅಭಿನಯದ "ರಾಜ್" ಚಲನಚಿತ್ರಕ್ಕೆ ಲಭಿಸಿದ್ದ 4 ಪ್ರಶಸ್ತಿಗಳನ್ನು ಹೈಕೋರ್ಟಿನ ಸೂಚನೆ ಮೇರೆಗೆ ಹಿಂಪಡೆಯಲಾಗಿದೆ.
2009-10 ನೇ ಸಾಲಿನಲ್ಲಿ ರಾಜ್ಯ ಸರ್ಕಾರ 'ರಾಜ್' ಚಿತ್ರಕ್ಕೆ ವಿ.ಹರಿಕೃಷ್ಣ ಅವರಿಗೆ ನೀಡಲಾಗಿದ್ದ "ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ", ಶ್ರೀ ಶ್ರೀನಿವಾಸ್ ಬಾಬು ಅವರಿಗೆ ನೀಡಲಾಗಿದ್ದ "ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ", ಶ್ರೀ ಟಿಪ್ಪು ಅವರಿಗೆ ನೀಡಲಾಗಿದ್ದ "ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ" ಹಿಂಪಡೆಯಲಾಗಿದೆ. ಅಲ್ಲದೇ ಶ್ರೀನಗರ ಕಿಟ್ಟಿ ಅಭಿನಯದ "ಒಲವೇ ಜೀವನ ಲೆಕ್ಕಚಾರ" ಕನ್ನಡ ಚಲನಚಿತ್ರಕ್ಕೆ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ನೀಡಲಾಗಿದ್ದ "ಅತ್ಯುತ್ತಮ ಕಥೆ ಬರಹಗಾರ" ಪ್ರಶಸ್ತಿಯನ್ನು ಹಿಂದಿರಿಗಿ ಸ್ವೀಕರಿಸಲಾಗಿದೆ.
ಶ್ರೀ ಹರಿಕೃಷ್ಣ, ಶ್ರೀ ಶ್ರೀನಿವಾಸ್ ಬಾಬು ಮತ್ತು ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಇವರುಗಳಿಗೆ ಪ್ರಶಸ್ತಿ ಜೊತೆಗೆ ನೀಡಲಾಗಿದ್ದ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನಗಳನ್ನು ಹಿಂಪಡೆಯಲಾಗಿದೆ. ಗಾಯಕ ಶ್ರೀ ಟಿಪ್ಪು ಅವರಿಗೆ ನೀಡಲಾಗಿದ್ದ "ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ'ಗೆ ಸಂಬಂಧಿಸಿದ ಫಲಕ ಮತ್ತು ನಗದು ಬಹುಮಾನಗಳನ್ನು ಹಿಂಪಡೆಯಲಾಗಿದ್ದು, ಪ್ರಶಸ್ತಿ ಪತ್ರ ಕಳೆದು ಹೋಗಿರುವ ಕಾರಣ ಅದನ್ನು ಹಿಂಪಡೆಯಲಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅಂದಹಾಗೆ ಅವಧಿ ಮೀರಿ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಹೈಕೋರ್ಟ್ ಗೆ ಎಸ್.ರಾಧ ಎಂಬುವವರು ಈ ಹಿಂದೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಶಸ್ತಿಗಳನ್ನು ಹಿಂಪಡೆಯಲು ಹೈಕೋರ್ಟ್ ಸೂಚಿಸಿತ್ತು.