Don't Miss!
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಐಶ್ವರ್ಯ’ ಗೆದ್ದಿದೆ... ಬಾಲಿವುಡ್ ಕರೆದಿದೆ... -ಇಂದ್ರಜಿತ್
ಸ್ವಘೋಷಿತ ಸ್ಟಾರ್ ನಿರ್ದೇಶಕ ಮತ್ತು ಪತ್ರಕರ್ತ ಇಂದ್ರಜಿತ್ ಲಂಕೇಶ್, ಬಹುದೊಡ್ಡ ತಾರಾಗಣದ ಹಿಂದಿ ಚಿತ್ರ ನಿರ್ದೇಶಿಸುವ ಮೂಲಕ, ಬಾಲಿವುಡ್ಗೆ ಎಂಟ್ರಿಪಡೆಯಲಿದ್ದಾರಂತೆ!
ಮಾಧ್ಯಮ ಮಿತ್ರರೊಂದಿಗೆ ಮಾತನಾಡುತ್ತಾ ಈ ವಿಷಯವನ್ನು ಸ್ವತ-ಃ ಇಂದ್ರಜಿತ್ ಬಹಿರಂಗಪಡಿಸಿದ್ದಾರೆ. ಹಿಂದಿ ಚಿತ್ರದ ಸ್ಕಿೃಪ್ಟ್ ಕೆಲಸ ನಡೆಯುತ್ತಿದೆ. ಮುಂದಿನ ಒಂದೂವರೆ ವರ್ಷ ಈ ಚಿತ್ರ ನಿರ್ದೇಶನದಲ್ಲಿ ನಿರತನಾಗುವೆ. ಚಿತ್ರದ ನಿರ್ಮಾಪಕರೇ ಬೃಹತ್ ಪತ್ರಿಕಾಗೋಷ್ಠಿ ಕರೆದು ಈ ಕುರಿತ ಮಾಹಿತಿಯನ್ನು ನೀಡಲಿದ್ದಾರೆ ಎನ್ನುತ್ತಾರೆ ಇಂದ್ರಜಿತ್.
ತಮ್ಮ ‘ಐಶ್ವರ್ಯ’ ಚಿತ್ರದ ಬಗ್ಗೆ ಮಾತು ಮುಂದುವರೆಸಿದ ಅವರು, ಮಾಧ್ಯಮದ ವರದಿಗಳಲ್ಲಿ ಹುರುಳಿಲ್ಲ. ಚಿತ್ರ ಗೆದ್ದಿದೆ. ಬೆಂಗಳೂರು-ಕೋಲಾರ-ತುಮಕೂರು ಪ್ರದೇಶದಲ್ಲಿ ಗರಿಷ್ಠ ಗಳಿಕೆ ಮಾಡಿದೆ. ಬೇಕಿದ್ದರೆ ಈ ಬಗ್ಗೆ ದಾಖಲೆಗಳನ್ನು ನೀಡಬಲ್ಲೆ ಎಂದು ಸವಾಲು ಹಾಕಿದರು.
ಬಂದ ಲಾಭದಲ್ಲಿ ಸುಮಾರು 25ಲಕ್ಷ ರೂಪಾಯಿಗಳನ್ನು ನಿರ್ಮಾಪಕ ಕೆ.ಸಿ.ಎನ್.ಕುಮಾರ್ ಅವರಿಗೆ ನೀಡಿದ್ದೇನೆ. ಚಿತ್ರ ನಿರ್ಮಾಣ ಸಂದರ್ಭದಲ್ಲಿ ಕುಮಾರ್ ತುಂಬಾ ಸಹಾಯ ಮಾಡಿದ್ದರು ಎಂದ ಇಂದ್ರಜಿತ್, ಕನ್ನಡ ಚಿತ್ರರಂಗದಲ್ಲಿ ತಲದೋರಿರುವ ಬಿಕ್ಕಟ್ಟಿನ ಬಗ್ಗೆ ಮಾತಾಡಿದರು.
ಕೆಲವು ನಿರ್ಮಾಪಕರು ಇಡೀ ಉದ್ಯಮವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು, ಹೊಸ ನಿರ್ಮಾಪಕರು ಚಿತ್ರ ನಿರ್ಮಾಣ ಕಾರ್ಯ ಆರಂಭಿಸದಂತೆ ಒತ್ತಡ ಹೇರುತ್ತಿದ್ದಾರೆ. ಇದು ಚಿತ್ರರಂಗದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಕಿಡಿಕಾರಿದರು.