Don't Miss!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರದನಾಯಕನಿಗೆ ನಿಕೇಷಾ ಪಟೇಲ್ ಎಂಬ ಪಟಾಕಿ
ನಟ ಚಿರಂಜೀವಿ ಸರ್ಜಾರ ಚಿತ್ರ ವರದನಾಯಕ, ಸದ್ಯದಲ್ಲೇ ಚಿತ್ರೀಕರಣವನ್ನು ಪೂರ್ಣಗೊಳಿಸಲಿದೆ. ಮಾಡೆಲ್ ಹುಡುಗಿ, ನರಸಿಂಹ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ನಾಯಕಿಯಾಗಿರುವ ನಿಕೇಷಾ ಪಟೇಲ್ 'ವರದನಾಯಕ' ಚಿರಂಜೀವಿ ಸರ್ಜಾಗೆ ನಾಯಕಿ. ನಿಕೇಷಾ ಪಟೇಲ್ ನಟಿಸಿರುವ ಚಿತ್ರ 'ನರಸಿಂಹ' ಚಿತ್ರ ಇದೇ ಮಾರ್ಚ್ 23, 2012 ಕ್ಕೆ ಬಿಡುಗಡೆಯಾಗುತ್ತಿದೆ.
ಸುದೀಪ್ ಪ್ರಮುಖ ಪಾತ್ರದಲ್ಲಿರುವ 'ವರದನಾಯಕ' ಚಿತ್ರದಲ್ಲಿ ಚಿರು ಮತ್ತು ನಿಕೇಷಾ ಪಟೇಲ್ ಇಬ್ಬರೂ ಕಾಲೇಜು ಓದುತ್ತಿರುವ ಜೋಡಿ. ಚಿರುಗೆ ಅಣ್ಣನಾಗಿ, ಖಡಕ್ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದಲ್ಲಿ ನಟಿಸಲಿದ್ದಾರೆ ಕನ್ನಡದ ಕಿಚ್ಚ ಸುದೀಪ್. ಖಡಕ್ ಪೊಲೀಸ್ ಅಧಿಕಾರಿಯಾದರೂ ಪ್ರೀತಿಯ ತಮ್ಮನ ಪ್ರೇಮಕ್ಕೆ ಅಡ್ಡಿಯಾಗದ ಪಾತ್ರವಂತೆ ಸುದೀಪ್ ಅವರದು.
ತೆಲುಗಿನಲ್ಲಿ ಸೂಪರ್ ಹಿಟ್ ಎನಿಸಿದ್ದ 'ಲಕ್ಷ್ಯಂ' ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಿ ನಿರ್ದೇಶಿಸುತ್ತಿರುವವರು ನಟ ಸಾಯಿಕುಮಾರ್ ಅವರ ಸಹೋದರ ಅಯ್ಯಪ್ಪ. ಚಿತ್ರೀಕರಣ ಆರಂಭವಾಗಿದ್ದರೂ ಪ್ರಮುಖ ಸನ್ನಿವೇಷಗಳ ಚಿತ್ರೀಕರಣ ಬಾಕಿ ಇದೆ. ಸುದೀಪ್ ಜೊತೆಯಲ್ಲಾದರೂ ಚಿರು ವೃತ್ತಿಜೀವನ ಮೇಲಕ್ಕೇರಬಹುದೇ ಎಂದು ಪ್ರಶ್ನಿಸುತ್ತಿದೆ ಗಾಂಧಿನಗರ. (ಒನ್ ಇಂಡಿಯಾ ಕನ್ನಡ)