ಸ್ನೇಹಿತರಿಗಾಗಿ ಚೆನ್ನೈನಲ್ಲಿ ದರ್ಶನ್ ದಂಡಂದಶಗುಣಂ
ಸ್ನೇಹಿತರಿಗಾಗಿ ಚಾಲೆಂಜಿಂಗ್ ಸ್ಟಾರ್ ಸಾಕಷ್ಟು ರಿಸ್ಕ್ ತೆಗೆದುಕೊಂಡು ಚೆನ್ನೈಗೆ ಹೋಗಿದ್ದಾರೆ. ಅಲ್ಲಿ ಸ್ನೇಹಿತರಿಗೋಸ್ಕರ ದೊಡ್ಡ ಮಟ್ಟದ ಸಾಹಸವನ್ನೂ ಮಾಡಿದ್ದಾರೆ. ಇದು ಸೌಂದರ್ಯ ಜಗದೀಶ್ ನಿರ್ಮಿಸುತ್ತಿರುವ ಚಿತ್ರ 'ಸ್ನೇಹಿತರು' ಶೂಟಿಂಗ್ ಹೈಲೈಟ್ಸ್.
ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಚೆನ್ನೈನಲ್ಲಿ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ದರ್ಶನ್ ಅವರದು ಅತಿಥಿ ಪಾತ್ರ. ರಾಮ್ ನಾರಾಯಣ್ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಪಳನಿ ರಾಜ್ ಅವರ ಸಾಹಸ ನಿರ್ದೇಶನದಲ್ಲಿ ಚೆನ್ನೈ ಬಂದರಿನಲ್ಲಿ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ.
'ಸ್ನೇಹಿತರು' ಬಹುತಾರಾಗಣದ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ತರುಣ್, ರವಿಶಂಕರ್ ಹಾಗೂ ಸೃಜನ್ ಲೋಕೇಶ್ ಪ್ರಮುಖ ಪಾತ್ರಧಾರಿಗಳು. ಚಿತ್ರದ ನಾಯಕಿ ಪ್ರಣೀತಾ. ಎಂ ಆರ್ ಸೀನು ಅವರ ಛಾಯಾಗ್ರಹಣ ಹಾಗೂ ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ. (ಏಜೆನ್ಸೀಸ್)
More from Filmibeat
English summary
An action sequence on Challenging Star Darshan for the film Snehitharu has been shot in Chennai recently. The movie is being produced by Soundarya Jagadish and directed by lyricist and dialogue writer turned film director Ram Narayan.


Click it and Unblock the Notifications











