Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಾವಣಗೆರೆಯಲ್ಲಿ ನಟ ದರ್ಶನ್ ಸಾರಥಿ ಸಾರೋಟು
ನಟ ದರ್ಶನ್ ರೋಡ್ ಶೋ ದಾವಣಗೆರೆಯಲ್ಲಿ ಅದ್ದೂರಿಯಾಗಿ ಗುರುವಾರ (ಅ.20) ನಡೆಯಿತು. ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳ ನಡುವೆ ನೂಕು ನುಗ್ಗಲು ಉಂಟಾಗಿ ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸ ಪಡೆಬೇಕಾಯಿತು. ಅಭಿಮಾನಿಗಳ ನಿಯಂತ್ರಣ ಕೈಮೀರಿದಾಗ ಲಘು ಲಾಠಿ ಪ್ರಹಾರ ಪ್ರಯೋಗಿಸಲಾಯಿತು.
ಬಳಿಕ ಅರುಣ ಚಿತ್ರಮಂದಿರದಲ್ಲಿ 'ಸಾರಥಿ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ಚಿತ್ರಮಂದಿರಲ್ಲಿ ಅಭಿಮಾನಿಗಳೊಂದಿಗೆ ಕೊಂಚ ಹೊತ್ತು ಚಿತ್ರವನ್ನು ದರ್ಶನ್ ವೀಕ್ಷಿಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಶಿಳ್ಳೆ, ಚಪ್ಪಾಳೆ, ಹರ್ಷೋದ್ಗಾರಗಳ ನಡುವೆ ಚಿತ್ರಮಂದಿರ ಪ್ರತಿಧ್ವನಿಸಿತು.
ಅರುಣ ಚಿತ್ರಮಂದಿರದ ಹೊರಗೆ ಪಟಾಕಿ ಸಿಡಿಸಿ ದೀಪಾವಳಿಯನ್ನು ಹಬ್ಬಕ್ಕೆ ಮುನ್ನವೇ ಆಚರಿಸಿ ದರ್ಶನ್ ಅಭಿಮಾನಿಗಳು ಸಂಭ್ರಮಿಸಿದರು. ಬಳಿಕ ತೆರೆದ ವಾಹನದಲ್ಲಿ ಅರುಣ ಚಿತ್ರಮಂದಿರದ ಸರ್ಕಲ್ನಿಂದ ಗಾಂಧಿವೃತ್ತದವರೆಗೂ ಅಭಿಮಾನಿಗಳೆಡೆಗೆ ಕೈಬೀಸುತ್ತಾ ದರ್ಶನ್ ಸಾಗಿದರು.
ತಮ್ಮ ಮೇಲೆ ತೋರಿದ ಅಭಿಮಾನಕ್ಕೆ ದರ್ಶನ್ ಕೃತಜ್ಞತೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಉತ್ತಮ ಚಿತ್ರಗಳಲ್ಲಿ ನಟಿಸಿ ನಿಮ್ಮನ್ನು ರಂಜಿಸುವ ಭರವಸೆಯನ್ನು ನೀಡಿದರು. ನಿರ್ದೇಶಕ ದಿನಕರ್ ತೂಗುದೀಪ, ಶ್ರೀನಿವಾಸ್, ನಟ ಯಶ್ರಾಜ್ ಮುಂತಾದವರು ಸಾಥ್ ನೀಡಿದರು.
ಬಳಿಕ ಅವರ ಸಾರಥಿ ಸಾರೋಟು ಗಂಗಾವತಿಗೆ ಪಯಣ ಬೆಳಸಿತು. ಅಲ್ಲೂ ದರ್ಶನ್ ಅಭಿಮಾನಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಗಂಗಾವತಿಯಲ್ಲಿ ಕೇಕ್ ಕತ್ತರಿಸಿ ಸಾರಥಿ ಚಿತ್ರದ ಗೆಲುವನ್ನು ಆಚರಿಸಿದರು. ತಮ್ಮ ಮೇಲಿನ ಅಭಿಮಾನವನ್ನು ಹೀಗೇ ಚಿರಸ್ಥಾಯಿಯಾಗಿರಲಿ ಎಂದು ದರ್ಶನ್ ವಿನಂತಿಸಿಕೊಂಡರು. (ಒನ್ಇಂಡಿಯಾ ಕನ್ನಡ)