Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುಟ್ಟಾಗಿ 'ಎಕೆ 56' ನೋಡಿಲು ಹೋಗಿದ್ದರೇ ದರ್ಶನ್?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಚ್ಚಿ ಬಿದ್ದಿದ್ದಾರಾ? ಹೌದು ಎನ್ನುತ್ತಿವೆ ಗಾಂಧಿನಗರದ ಸುದ್ದಿ ಮೂಲಗಳು. ಕಾರಣ ಸ್ವಲ್ಪ ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವ ಓಂ ಪ್ರಕಾಶ್ ರಾವ್ ನಿರ್ದೇಶನದ ಎಕೆ 56 ಚಿತ್ರ. ದರ್ಶನ್ ನಾಯಕತ್ವದಲ್ಲಿ ಇದೇ ಓಂ ಪ್ರಕಾಶ್ ರಾವ್ 'ಕಲಾಸಿಪಾಳ್ಯ' ಮಾಡಿ ಗೆಲ್ಲಿಸಿದ್ದರು.
ಈಗ ಬರೋಬ್ಬರಿ 12 ಕೋಟಿ ಸುರಿದು ನಾಯಕನಟರಾಗಿ ಎಕೆ 56 ಚಿತ್ರದಲ್ಲಿ ನಟಿಸಿದ್ದಾರೆ ಸಿದ್ಧಾಂತ್. ಚಿಂಗಾರಿ ಚಿತ್ರದಷ್ಟೇ ಶ್ರೀಮಂತವಾಗಿದೆ ಈ ಸಿದ್ಧಾಂತ್ ನಿರ್ಮಾಣದ ಎಕೆ 56. ಶಿರಿನ್ ಹಾಗೂ ಸಿದ್ಧಾಂತ್ ಜೋಡಿಯನ್ನು ಜನ ನಿಧಾನವಾಗಿ ಇಷ್ಟಪಡುತ್ತಿದ್ದು ಚಿತ್ರಮಂದಿರಕ್ಕೆ ಬರಲು ಪ್ರಾರಂಭಿಸಿದ್ದಾರೆ. ಸಹಜವಾಗಿ ಚಿತ್ರತಂಡ ಖುಷಿಯಾಗಿದೆ.
ಆದರೆ ಇದೇ ಕಾರಣಕ್ಕೆ ದರ್ಶನ್ ಗಾಬರಿಬಿದ್ದು ಈ ಚಿತ್ರವನ್ನು ಗುಟ್ಟಾಗಿ ನೋಡಿ ಹೋಗಿದ್ದಾರೆ ಎನ್ನುತ್ತಿವೆ ಸುದ್ದಿಮೂಲಗಳು. ಕಲಾಸಿಪಾಳ್ಯ ಹಾಗೂ ಅಯ್ಯ ಬಿಟ್ಟರೆ ದರ್ಶನ್-ಓಂ ಪ್ರಕಾಶ್ ರಾವ್ ಜೋಡಿಯ ಯಾವ ಚಿತ್ರವೂ ಹೇಳಿಕೊಳ್ಳುವಂತ ಯಶಸ್ಸು ಪಡೆದಿಲ್ಲ. ಈಗ ಈ ಚಿತ್ರ ಯಶಸ್ವಿಯಾಗುವುದೋ ಏನೋ?
ಹಬ್ಬಿರುವ ಸುದ್ದಿ ಏನೇ ಇರಲಿ, ದರ್ಶನ್ ಮತ್ತು ಓಂ ಇಬ್ಬರೂ ಆಗಿನಿಂದ ಈಗಿನವರೆಗೂ ಆತ್ಮೀಯರು. ಹೀಗಿರುವಾಗ ಕದ್ದು ಹೋಗುವುದೇನು ಬಂತು. ಓಂ ಕರೆದಿದ್ದಾರೆ, ದರ್ಶನ್ ಹೋಗಿ ನೋಡಿ ಬಂದಿದ್ದಾರೆ. ಇವೆಲ್ಲಾ ಕೇವಲ ಪಬ್ಲಿಸಿಟಿ ಗಿಮಿಕ್ ಅನ್ನುತ್ತಿದ್ದಾರೆ ಎಲ್ಲವನ್ನೂ ಬಲ್ಲವರಂತೆ ಮಾತನಾಡುವ ಗಾಂಧಿನಗರದ ಬಹಳಷ್ಟು ಪಂಡಿತರು. (ಒನ್ ಇಂಡಿಯಾ ಕನ್ನಡ)