Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೇಮ ವಿವಾಹದಲ್ಲಿ ಒಂದಾದ ಸತ್ಯ, ನಿರ್ಮಾಲಾ
ಬೆಂಗಳೂರಿನ ರಿಜಿಸ್ಟ್ರಾರ್ ಕಚೇರಿಯಲ್ಲಿ ನಟ ಸತ್ಯ (ಆ ದಿನಗಳು ಖ್ಯಾತಿ) ಹಾಗೂ ಕಿರುತೆರೆ ನಟಿ ನಿರ್ಮಾಲಾ ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಳ್ಳುವ ಮೂಲಕ ಸೋಮವಾರ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಸತ್ಯ ಅಭಿನಯದ 'ಗುಂಡ್ರಗೋವಿ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಆ ದಿನಗಳು, ಸ್ಲಂ ಬಾಲ, ದುನಿಯಾ ಚಿತ್ರಗಳು ಸತ್ಯ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟ ಚಿತ್ರಗಳು. ರಘು ಜಯ ನಿರ್ದೇಶಿಸುತ್ತಿರುವ 'ರಾಜಧಾನಿ' ಚಿತ್ರದಲ್ಲೂ ಸತ್ಯ ಅಭಿನಯಿಸುತ್ತಿದ್ದಾರೆ. ಗೀತ ಸಾಹಿತಿ ಹಾಗೂ ಚಿತ್ರ ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರ 'ವಿನಾಯಕರ ಗೆಳೆಯರ ಬಳಗ' ಚಿತ್ರಕ್ಕೂ ಸತ್ಯ ಸಹಿ ಹಾಕಿದ್ದಾರೆ.
ನಟಿ ನಿರ್ಮಾಲಾ ಸಹ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಪಾರ್ವತಿ ಪರಮೇಶ್ವರ, ಮುತ್ತಿನ ತೋರಣ, ರಂಗೋಲಿಯಂತಹ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ನಿರ್ಮಾಲಾ ಅಭಿನಯಿಸಿದ್ದಾರೆ. ಈಕೆ ಕನ್ನಡದ ವಿಭಿನ್ನ ಚಿತ್ರ 'ಹಾಡು ಹಕ್ಕಿಯನೇರಿ'ಯಲ್ಲೂ ನಟಿಸಿದ್ದಾರೆ.
ಸತ್ಯ ಮತ್ತು ನಿರ್ಮಲಾ ಇಬ್ಬರೂ ಒಟ್ಟಿಗೆ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದವರು. ಒಬ್ಬರನ್ನೊಬ್ಬರು ಮೆಚ್ಚ್ಚಿ, ಒಬ್ಬರ ಇಷ್ಟಗಳು ಇನ್ನೊಬ್ಬರಿಗೆ ತಾಳೆಯಾಗಿ ಈಗ ಪ್ರೇಮ ವಿವಾಹವಾಗಿದ್ದಾರೆ. ರಂಗಾಸಕ್ತರಾದ ಇವರಿಬ್ಬರ ಪ್ರೇಮ ಹತ್ತು ವರ್ಷಗಳ ಹಿಂದೆಯೇ ಚಿಗುರೊಡೆದಿತ್ತು. ಅಂದು ಚಿಗುರಿದ ಪ್ರೇಮ ಇಂದು ಕನಸಾಗಿದೆ. ಸತ್ಯ ಮತ್ತು ನಿರ್ಮಾಲಾ ಅವರಿಗೆ ಮದುವೆಯ ಶುಭಾಶಯಗಳು.