twitter
    For Quick Alerts
    ALLOW NOTIFICATIONS  
    For Daily Alerts

    ನಿರ್ದೇಶಕ ತುಷಾರ್ ರಂಗನಾಥ್ ನಿಧನ

    |

    ಚಲನಚಿತ್ರ ನಿರ್ದೇಶಕ, ಸಂಭಾಷಣೆಕಾರ ತುಷಾರ್ ರಂಗನಾಥ್ ಮಂಗಳವಾರ (ಡಿ.20) ತಡರಾತ್ರಿ ನಿಧನ ಹೊಂದಿದ್ದಾರೆ. ತೀವ್ರ ಹೃದಯಾಘಾತಕ್ಕೆ ಒಳಗಾದ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

    ಮಾರ್ಚ್ 31, 1974 ರಲ್ಲಿ ಜನಿಸಿದ ತುಷಾರ್ ರಂಗನಾಥ್ ಪ್ರಜ್ವಲ್ ದೇವರಾಜ್ ಅಭಿನಯದ ಗುಲಾಮ ಚಿತ್ರದ ಮೂಲಕ ನಿರ್ದೇಶಕರಾಗಿದ್ದರು. ಕಂಠೀರವ, ನಿಷೇದಾಜ್ಞೆ ಸೇರಿದಂತೆ ಅನೇಕ ಚಿತ್ರಗಳನ್ನು ತುಷಾರ್ ನಿರ್ದೇಶಿಸಿದ್ದರು. ಬಹಳಷ್ಟು ಚಿತ್ರಗಳಿಗೆ ತುಷಾರ್ ಸಂಭಾಷಣೆ ಬರೆದಿದ್ದರು.

    15 ಗಂಟೆಯಲ್ಲಿ ಚಿತ್ರೀಕರಣಗೊಂಡಿದ್ದ ಶಿವರಾಜ್ ಕುಮಾರ್ ಅಭಿನಯದ 'ಸುಗ್ರೀವ' ಚಿತ್ರದಲ್ಲಿ ತುಷಾರ್ ಕೂಡ ಒಬ್ಬ ಒಬ್ಬ ನಿರ್ದೇಶಕರಾಗಿದ್ದರು. ತುಷಾರ್ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ನಮ್ಮನ್ನು ಅಗಲಿದ ತುಷಾರ್ ರಂಗನಾಥ್ ಗೆ ಒನ್ ಇಂಡಿಯಾ ಕನ್ನಡ ಶ್ರದ್ಧಾಂಜಲಿ ಅರ್ಪಿಸುತ್ತದೆ. (ಒನ್ ಇಂಡಿಯಾ ಕನ್ನಡ)

    English summary
    Kannada Film Director Tushar Ranganth died by massive heart attack. He was 38.
    Wednesday, December 21, 2011, 9:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X