Don't Miss!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ಗಾಗಿ ಯೋಗರಾಜ್ ಭಟ್, ನಾಗಶೇಖರ್ ಸಮರ
ಪುನೀತ್ ರಾಜ್ ಕನ್ನಡ ಚಿತ್ರರಂಗದ ಚಿನ್ನದ ಓಡುವ ಕುದರೆ, ಚಿನ್ನದ ನಟ. ಮಾಡಿದ ಚಿತ್ರವೆಲ್ಲಾ ಮಾಸ್ ಹಾಗೂ ಕ್ಲಾಸ್ ಜನರಿಗೆ ಇಷ್ಟವಾಗಿ ಈ ನಟ ಮುಟ್ಟಿದ್ದೆಲ್ಲ ಚಿನ್ನ, ಸಿನಿಮಾ ಎಲ್ಲ ಚೆನ್ನ ಎಂಬಂತಾಗಿದೆ. ಅವರ ಇತ್ತೀಚಿನ ಪರಮಾತ್ಮ ಕೂಡ ಜನರಿಗೆ ತೀರಾ ಇಷ್ಟವಾಗದಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಕಂಡಿದೆ. ಕನ್ನಡದಲ್ಲಿ 3 ಕೋಟಿ ಸಂಭಾವನೆ ಪಡೆಯುವ ನಟರಲ್ಲಿ ಪುನೀತ್ ಒಬ್ಬರು.
ಈಗ ವಿಷಯ ಏನೆಂದರೆ, ಈ ಪುನೀತ್ ಕಾಲ್ ಶೀಟ್ ಗಾಗಿ ಕನ್ನಡದ ಜನಪ್ರಿಯ ನಿರ್ದೇಶಕರ ನಡುವೆ ತೆರೆಮರೆಯ ಗುದ್ದಾಟ ಪ್ರಾರಂಭವಾಗಿದೆ. ನಾಗಶೇಖರ್ ಈಗಾಗಲೇ 'ಆಂಜನೇಯ' ಎಂಬ ಶೀರ್ಷಿಕೆಯಿಟ್ಟು ಕಥೆ, ಚಿತ್ರಕಥೆ ಸಮೇತ ಪುನೀತ್ ರಾಜ್ ಜೊತೆ ಮಾತಾಡಿದ್ದಾಗಿದೆ. ಪುನೀತ್ ಚಿತ್ರಕಥೆಯಲ್ಲಿ ಕೆಲವೊಂದು ಬದಲಾವಣೆ ಸೂಚಿಸಿ ಮತ್ತೆ ಚಿತ್ರಕಥೆ ಮಾಡಲು ಹೇಳಿದ್ದೂ ಆಗಿದೆ. ಮುಂದಿನದು ಮಂದೆ.
ಆದರೆ ಯೋಗರಾಜ್ ಭಟ್ಟರ 'ಜೈ ಭಜರಂಗಬಲಿ' ಶೀರ್ಷಿಕೆಯ ಕಥೆಯನ್ನು ಪುನೀತ್ ಇನ್ನೂ 'ಓಕೆ' ಮಾಡಿಲ್ಲ. ಕಾರಣ, ಬಾಕ್ಸ್ ಆಫೀಸ್ 'ಹಿಟ್' ಆಗಿದ್ದರೂ ಪರಮಾತ್ಮ ಜನರನ್ನು ಮೆಚ್ಚಿಸುವಲ್ಲಿ ವಿಫಲವಾಗಿದ್ದು. ಆದರೆ ಭಟ್ಟರ ಮೊದಲಿನ ಖ್ಯಾತಿಯನ್ನು ಮರೆಯುವಂತಿಲ್ಲ. ಇದೀಗ ಈ ಇಬ್ಬರು ನಿರ್ದೆಶಕರಲ್ಲಿ ಯಾರ ಕಥೆಗೆ ಪುನೀತ್ 'ಕಾಲ್ ಶೀಟ್' ಕೊಡುತ್ತಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್. (ಒನ್ ಇಂಡಿಯಾ ಕನ್ನಡ)