Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ಗಾಗಿ ಯೋಗರಾಜ್ ಭಟ್, ನಾಗಶೇಖರ್ ಸಮರ
ಪುನೀತ್ ರಾಜ್ ಕನ್ನಡ ಚಿತ್ರರಂಗದ ಚಿನ್ನದ ಓಡುವ ಕುದರೆ, ಚಿನ್ನದ ನಟ. ಮಾಡಿದ ಚಿತ್ರವೆಲ್ಲಾ ಮಾಸ್ ಹಾಗೂ ಕ್ಲಾಸ್ ಜನರಿಗೆ ಇಷ್ಟವಾಗಿ ಈ ನಟ ಮುಟ್ಟಿದ್ದೆಲ್ಲ ಚಿನ್ನ, ಸಿನಿಮಾ ಎಲ್ಲ ಚೆನ್ನ ಎಂಬಂತಾಗಿದೆ. ಅವರ ಇತ್ತೀಚಿನ ಪರಮಾತ್ಮ ಕೂಡ ಜನರಿಗೆ ತೀರಾ ಇಷ್ಟವಾಗದಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಕಂಡಿದೆ. ಕನ್ನಡದಲ್ಲಿ 3 ಕೋಟಿ ಸಂಭಾವನೆ ಪಡೆಯುವ ನಟರಲ್ಲಿ ಪುನೀತ್ ಒಬ್ಬರು.
ಈಗ ವಿಷಯ ಏನೆಂದರೆ, ಈ ಪುನೀತ್ ಕಾಲ್ ಶೀಟ್ ಗಾಗಿ ಕನ್ನಡದ ಜನಪ್ರಿಯ ನಿರ್ದೇಶಕರ ನಡುವೆ ತೆರೆಮರೆಯ ಗುದ್ದಾಟ ಪ್ರಾರಂಭವಾಗಿದೆ. ನಾಗಶೇಖರ್ ಈಗಾಗಲೇ 'ಆಂಜನೇಯ' ಎಂಬ ಶೀರ್ಷಿಕೆಯಿಟ್ಟು ಕಥೆ, ಚಿತ್ರಕಥೆ ಸಮೇತ ಪುನೀತ್ ರಾಜ್ ಜೊತೆ ಮಾತಾಡಿದ್ದಾಗಿದೆ. ಪುನೀತ್ ಚಿತ್ರಕಥೆಯಲ್ಲಿ ಕೆಲವೊಂದು ಬದಲಾವಣೆ ಸೂಚಿಸಿ ಮತ್ತೆ ಚಿತ್ರಕಥೆ ಮಾಡಲು ಹೇಳಿದ್ದೂ ಆಗಿದೆ. ಮುಂದಿನದು ಮಂದೆ.
ಆದರೆ ಯೋಗರಾಜ್ ಭಟ್ಟರ 'ಜೈ ಭಜರಂಗಬಲಿ' ಶೀರ್ಷಿಕೆಯ ಕಥೆಯನ್ನು ಪುನೀತ್ ಇನ್ನೂ 'ಓಕೆ' ಮಾಡಿಲ್ಲ. ಕಾರಣ, ಬಾಕ್ಸ್ ಆಫೀಸ್ 'ಹಿಟ್' ಆಗಿದ್ದರೂ ಪರಮಾತ್ಮ ಜನರನ್ನು ಮೆಚ್ಚಿಸುವಲ್ಲಿ ವಿಫಲವಾಗಿದ್ದು. ಆದರೆ ಭಟ್ಟರ ಮೊದಲಿನ ಖ್ಯಾತಿಯನ್ನು ಮರೆಯುವಂತಿಲ್ಲ. ಇದೀಗ ಈ ಇಬ್ಬರು ನಿರ್ದೆಶಕರಲ್ಲಿ ಯಾರ ಕಥೆಗೆ ಪುನೀತ್ 'ಕಾಲ್ ಶೀಟ್' ಕೊಡುತ್ತಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್. (ಒನ್ ಇಂಡಿಯಾ ಕನ್ನಡ)