Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ಕುಮಾರ್ ಮತ ಚಲಾಯಿಸಲಿಲ್ಲ !
ರಾಜ್ ಅಷ್ಟೇ ಏಕೆ, ಅವರ ಕುಟುಂಬದ ಯಾರೊಬ್ಬರೂ ಮತ ಚಲಾಯಿಸಲು ಸಾಧ್ಯವಾಗಲಿಲ್ಲ . ಕಾರಣ, ಅವರುಗಳ ಹೆಸರು ಮತ ಪಟ್ಟಿಯಲ್ಲಿ ಇರಲಿಲ್ಲ . ಗುರುತಿನ ಚೀಟಿಯಿದ್ದರೂ, ಮತಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ರಾಜ್ ಕುಟುಂಬ ಮತದಾನದಿಂದ ವಂಚಿತವಾಗಬೇಕಾಯಿತು.
ರಾಜ್ ಕುಟುಂಬದ 28 ಸದಸ್ಯರು ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಆದರೆ, ಕುಟುಂಬದ ಕೆಲ ಮಂದಿ ಮತ ಚಲಾಯಿಸಲು ಬೆಂಗಳೂರಿನ ಸದಾಶಿವನಗರ ಪೂರ್ಣಪ್ರಜ್ಞ ಶಾಲೆಗೆ ಬಂದಾಗ ಅಚ್ಚರಿ ಕಾದಿತ್ತು ! ಮತ ಪಟ್ಟಿಯಲ್ಲಿ ಕುಟುಂಬದ ಎಲ್ಲ ಸದಸ್ಯರುಗಳ ಹೆಸರು ನಾಪತ್ತೆಯಾಗಿದ್ದವು. ಐದಾರು ಮತಗಟ್ಟೆ ಸುತ್ತಿದರೂ ಉಪಯೋಗವಾಗಲಿಲ್ಲ ಎಂದು ಶಿವರಾಜ್ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶಿವರಾಜ್ ಪ್ರಕಾರ್- ರಾಜ್ ಮನೆಯಲ್ಲಿ ಕೆಲಸ ಮಾಡುವ ಎನ್.ರಾಜ್ಕುಮಾರ್ ಎನ್ನುವವರ ಹೆಸರು ಪಟ್ಟಯಲ್ಲಿದೆ. ಅವರು ಮತ ಚಲಾಯಿಸಿದ್ದಾರೆ. ಆದರೆ ರಾಜ್, ಪಾರ್ವತಮ್ಮ , ರಾಘವೇಂದ್ರ, ಪುನೀತ್, ಶಿವರಾಜ್ ಹಾಗೂ ಇತರರ ಹೆಸರೇ ನಾಪತ್ತೆ .
ಕಳೆದ ಅನೇಕ ಚುನಾವಣೆಗಳಲ್ಲಿ ಇದೇ ಮತಗಟ್ಟೆಯಿಂದ ವೋಟು ಚಲಾಯಿಸಿದ್ದೇವೆ. 1999ರ ಚುನಾವಣೆಯಲ್ಲೂ ವೋಟು ಹಾಕಿದ್ದೇವೆ. ಆದರೆ, ಈಗ ನೋಡಿದರೆ ಹೆಸರುಗಳೇ ನಾಪತ್ತೆ . ಇದರಿಂದಾಗಿ ಷಾಕ್ ಆಯಿತು ಎಂದು ಪಾರ್ವತಮ್ಮ ರಾಜ್ಕುಮಾರ್, ಮತದಾನ ಸಾಧ್ಯವಾಗದ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ.
ದಿವಂಗತ ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿಯ ವಾರಸುದಾರಿಣಿ-ನೃತ್ಯಗಾತಿ ಪ್ರತಿಭಾ ಪ್ರಹ್ಲಾದ್ ಅವರ ಹೆಸರು ಕೂಡ ಸದಾಶಿವನಗರದ ಮತ ಪಟ್ಟಿಯಿಂದ ಕಾಣೆಯಾಗಿತ್ತು . ವೋಟು ಹಾಕಲೆಂದೇ ದೆಹಲಿಯಿಂದ ಹಾರಿಬಂದಿದ್ದ ಪ್ರತಿಭಾ- ಮತ ಚಲಾಯಿಸಲು ಸಾಧ್ಯವಾಗದ ಕುರಿತು ಆಕ್ರೋಶ ವ್ಯಕ್ತಪಡಿಸಿದರು.