ಮಕ್ಕಳಿಗಾಗಿ ರಮೇಶ್ ನಿರ್ದೇಶಕರಾದರು !

ಮಕ್ಕಳಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳು-ಕರ್ತವ್ಯಗಳು ಹಾಗೂ ಸಕ್ರಿಯ ಪೌರತ್ವದ ಅರಿವನ್ನು ಮೂಡಿಸುವ ಉದ್ದೇಶದಿಂದ ಸಿ.ಎಮ್.ಸಿ.ಎ(ಚಿಲ್ಡನ್ಸ್ ಮೂಮೆಂಟ್ ಫಾರ್ ಸಿವಿಕ್ ಅವೇರನೆಸ್) ನಿರ್ಮಿಸಿರುವ 'ಹೌದುದು ಸಕ್ರಿಯ ನಾಗರಿಕನಾಗುವುದೇ ನನ್ನ ಇಚ್ಛೆ' (Of course I want to be an active citizen) ಎಂಬ ಮಕ್ಕಳ ಕಿರುಚಿತ್ರದ ಪ್ರದರ್ಶನ ಶುಕ್ರವಾರ (ಆ.20) ಬೆಂಗಳೂರಿನ ಕಬ್ಬನ್ ಉದ್ಯಾನದಲ್ಲಿನ ಬಾಲಭವನದಲ್ಲಿ ನಡೆಯಿತು. 20 ನಿಮಿಷದ ಈ ಕಿರುಚಿತ್ರದ ಪರಿಕಲ್ಪನೆ, ಕಥೆ ಹಾಗೂ ನಿರ್ದೇಶನ ರಮೇಶ್ ಅವರದು. ನಿರ್ದೇಶಕನಾಗಬೇಕು ಎನ್ನುವ ರಮೇಶ್ರ ಆಸೆ ಈ ಕಿರುಚಿತ್ರದ ಮೂಲಕ ಈಡೇರಿದೆ !
ಈ ಕಿರುಚಿತ್ರ ಪ್ರಸಂಗದಲ್ಲಿ ಕ್ರಿಕೆಟಿಗ ದ್ರಾವಿಡ್ ಪಾತ್ರವೇನು ಎಂದಿರಾ ? ಆತ ನಟ. ಹೌದು, ದ್ರಾವಿಡ್ ಈ ಕಿರುಚಿತ್ರದ ಕೇಂದ್ರಪಾತ್ರದಲ್ಲಿ ನಟಿಸಿದ್ದಾರೆ. ಈ ಕಿರುಚಿತ್ರದ ಮುಖ್ಯ ಉದ್ದೇಶ ಜಗತ್ತಿನಾದ್ಯಂತ ಅನಿಯಂತ್ರಿತ ಅಭ್ಯಾಸದಿಂದ ಕೂಡಿದ ಮತ್ತು ಅಮಾನವೀಯ ಮುಖವಾಡ ಹೊತ್ತ ನಾಗರೀಕರಣದ ಸವಾಲುಗಳನ್ನು ಚಿಣ್ಣರಿಗೆ ಮುಟ್ಟಿಸುವುದು. ಮೂಲಭೂತ ಸೇವಾ ಸೌಕರ್ಯಗಳ ಪೂರೈಕೆಯಲ್ಲಾಗಿರುವ ತೀವ್ರ ಕೊರತೆಯನ್ನು ಮಕ್ಕಳಿಗೆ ತಿಳಿಸುವುದೂ ಈ ಕಿರುಚಿತ್ರದ ಉದ್ದೇಶವಾಗಿದೆ.
ಕಿರುಚಿತ್ರ ಬಿಡುಗಡೆ ಸಮಾರಂಭದಲ್ಲಿ ನಟ ರಮೇಶ ಅರವಿಂದ್, ಪಿ.ಎ.ಸಿ.ಅಧ್ಯಕ್ಷ ಪದ್ಮಶ್ರೀ ಸ್ಯಾಮುಯೆಲ್ ಪಾಲ್ ಹಾಜರಿದ್ದರು. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಿರುಚಿತ್ರ ವೀಕ್ಷಿಸಿದರು. ರಾಹುಲ್ದ್ರಾವಿಡ್ ಹಾಲೆಂಡಿನಲ್ಲಿ ಕ್ರಿಕೆಟ್ ಆಡುತ್ತಿರುವುದರಿಂದ ಅವರು ಕಾರ್ಯಕ್ರಮಕ್ಕೆ ಆ್ಯಬ್ಸೆಂಟ್.


Click it and Unblock the Notifications