twitter
    For Quick Alerts
    ALLOW NOTIFICATIONS  
    For Daily Alerts

    ಜ್ಯೋತಿಷಿ ಸಲಹೆ ಮೇರೆಗೆ ಕುಕ್ಕೆಗೆ ನಟ ದರ್ಶನ್ ಭೇಟಿ

    By Rajendra
    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್‌ರೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಭಾಗ್ಯ ಪಡೆದರು. ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ಅವರ ಆಶೀರ್ವಚನ ಪಡೆದು ಬಳಿಕ ಅವರು ಅಳದಂಗಡಿ ಶ್ರೀಸೋಮೇಶ್ವರನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು.

    ಅಲ್ಲಿ ಹೆಚ್ಚು ಸಮಯ ಕಳೆಯದೆ ದೇವಿಯ ಹಾಗೂ ಗಣೇಶನ ದರ್ಶನ ಪಡೆದು ತರಾತುರಿಯಲ್ಲಿ ಪೂಜೆ ಮುಗಿಸಿ ಐದೇ ನಿಮಿಷಕ್ಕೆ ಅಲ್ಲಿಂದ ಹೊರಟರು. ಇತ್ತೀಚೆಗಷ್ಟೇ ದರ್ಶನ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಮುಡಿ ಸಪರ್ಪಿಸಿದ್ದರು.

    ಈಗ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ತಮ್ಮ ಹರಕೆ ಸಲ್ಲಿಸಿದ್ದಾರೆ. ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ದರ್ಶನ್ ಅಳದಂಗಡಿಗೆ ಭೇಟಿ ನೀಡಿದ್ದಾಗಿ ತಿಳಿದುಬಂದಿದೆ. ಆದರೆ ದರ್ಶನ್ ಅವರನ್ನು ಭೇಟಿ ಮಾಡಲು ಅವರ ಅಪಾರ ಅಭಿಮಾನಿ ಬಳಗಕ್ಕೆ ಸಾಧ್ಯವಾಗಲಿಲ್ಲ. ಅವರು ಅಲ್ಲಿಂದ ಶೀಘ್ರವಾಗಿ ಹೊರಟುಬಿಟ್ಟರು.

    ದೇವಳದ ಆಡಳಿತ ಮೊಕ್ತೇಸರ ಡಾ.ಪದ್ಮಪ್ರಸಾದ ಅಜಿಲ ಹಾಗೂ ಸತ್ಯ ದೇವತೆ ದೇವಳದ ಶಿವಪ್ರಸಾದ ಅಜಿಲ ಅವರು ತಮ್ಮ ಮನೆಗೆ ಆಹ್ವಾನ ನೀಡಿದರು. ಆದರೆ ಯಾವುದಕ್ಕೂ ಪ್ರತಿಕ್ರಿಯಿಸದೆ ದರ್ಶನ್ ಅಲ್ಲಿಂದ ಹೊರಟು ಹೋಗಿದ್ದಾರೆ. ಇದರಿಂದ ಅವರ ಅಭಿಮಾನಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಗೆ ಕೊಂಚ ನಿರಾಶೆಯಾಯಿತು. (ಏಜೆನ್ಸೀಸ್)

    English summary
    Kannada actor Challenging Star Darshan and his family visited the renowned religious shrine of in the Sullia taluk of Dakshina Kannada District near Mangalore, Karnataka. He performed special pooja to Lord Subrahmanya.
    Tuesday, November 22, 2011, 12:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X