Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮದುವೆಯ ನಂತರ ಕಣ್ಣುಮುಚ್ಚಾಲೆಗೆ ಕಡಿವಾಣ ಹಾಕಿ
ಹಿರಿಯ ನಟ ಮನದೀಪ್ ರಾಯ್ ನಿರ್ದೇಶಕನಾಗಲು ಹೊರಟಿದ್ದಾರೆ. ಜನವರಿ 18, 2012ಕ್ಕೆ ಮುಹೂರ್ತ ಕೂಡ ನಿಗದಿಯಾಗಿದೆ. ಶಂಕರ್ ನಾಗ್ ಮಿತ್ರರೂ ಆಗಿರುವ ನಟ ಮನದೀಪ್ ರಾಯ್, ಹೊಸ ವಿಭಿನ್ನ ಕಥೆಯೊಂದನ್ನು ನಿರ್ದೇಶನಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದ ಹೆಸರು ಸದ್ಯಕ್ಕೆ 'ಹುಟ್ಟುಗುಣ'.
ಹೆಸರು ಬದಲಾಗುವ ಸಾಧ್ಯತೆ ಇದೆಯಂತೆ. ನಾಯಕ ನಟರಾಗಿ ರವಿಶಂಕರ್ ಹಾಗೂ ವಿಜಯ ರಾಘವೇಂದ್ರ ಆಯ್ಕೆಯಾಗಿದ್ದು ಇನ್ನೊಬ್ಬ ನಾಯಕನ ಹುಡುಕಾಟ ನಡೆದಿದೆ. ಪ್ರಮುಖ ಪಾತ್ರಧಾರಿಯಾಗಿ ನಟಿ 'ಸುಮನ್ ರಂಗನಾಥ್' ನಟಿಸಲಿದ್ದಾರೆ. ಮನದೀಪ್ ರಾಯ್ ಇರುವುದರಿಂದ ಕಾಮಿಡಿ ಚಿತ್ರದಲ್ಲಿ ಬೋನಸ್.
ಮದುವೆಯ ನಂತರ ಬೇರೆ ಸಂಬಂಧ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂಬ ಸಂದೇಶ ಚಿತ್ರದಲ್ಲಿದೆಯಂತೆ. ಮದುವೆಯ ನಂತರ ಕಣ್ಣುಮುಚ್ಚಾಲೆಗೆ ಕಡಿವಾಣ ಹಾಕಿ ಎನ್ನಲಿದ್ದಾರೆ ನಿರ್ದೇಶಕರು, ಮದುವೆಯ ಮೊದಲು ಎಷ್ಟು ಸಂಬಂಧಗಳನ್ನು ಬೇಕಾದರೂ ಇಟ್ಟುಕೊಳ್ಳಬಹುದಾ ಎಂಬ ಪ್ರಶ್ನೆಗೂ ನಿರ್ದೇಶಕರು ಉತ್ತರ ಹೇಳಬಹುದೇನೋ! ಎಲ್ಲದಕ್ಕೂ ಮನದೀಪ್ ರಾಯ್ ಕೇಳಿ ಅಥವಾ ಚಿತ್ರನೋಡಿ. (ಒನ್ ಇಂಡಿಯಾ ಕನ್ನಡ)