ಬಳ್ಳಾರಿಯಲ್ಲಿ ಯು ಟರ್ನ್ ಹೊಡೆದ ನಟ ಸುದೀಪ್
ತೆಲುಗು, ಹಿಂದಿ, ತಮಿಳು ಇನ್ನಿತರೆ ಭಾಷೆಗಳ ಸಿನಿಮಾಗಳನ್ನು ಪ್ರೋತ್ಸಾಹಿಸಿ ಆದರೆ ಕನ್ನಡ ಚಿತ್ರಗಳನ್ನು ಮಾತ್ರ ಮಿಸ್ ಮಾಡಿಕೊಳ್ಳಬೇಡಿ. ಕನ್ನಡ ಚಿತ್ರಗಳಿಗೆ ಮೊದಲು ಪ್ರಾಧಾನ್ಯತೆ ನೀಡಬೇಕು ಎಂದು ನಟ ಸುದೀಪ್ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಬಳ್ಳಾರಿಯಲ್ಲಿ ಹೇಳಿದ್ದಾರೆ.
ಬಳ್ಳಾರಿ ನಟರಾಜ ಚಿತ್ರಮಂದಿರದಲ್ಲಿ ತಮ್ಮ ಲೇಟೆಸ್ಟ್ ಚಿತ್ರ 'ವಿಷ್ಣುವರ್ಧನ' ವೀಕ್ಷಿಸಿದ ಬಳಿಕ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಿದರು. ರಾಜ್ಯದ ಗಡಿಪ್ರದೇಶದಲ್ಲಿ ಎರಡು ರಾಜ್ಯಗಳ ಪ್ರಜೆಗಳು ಸ್ನೇಹಪೂರ್ವಕವಾಗಿರಬೇಕು. ಪರಭಾಷಾ ಚಿತ್ರಗಳನ್ನು ಪ್ರೋತ್ಸಾಹಿಸಬೇಕು. ಕನ್ನಡ ಭಾಷೆಯನ್ನು ಮಾತ್ರ ಮರೆಯಬಾರದು ಎಂದು ಹಿತನುಡಿದಿದ್ದಾರೆ.
ತಾನು ಖ್ಯಾತ ನಟ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ. ಅವರ ಹೆಸರಿನ ಚಿತ್ರದಲ್ಲಿ ಅಭಿನಯಿಸಿರುವುದು ನನ್ನ ಪಾಲಿಗೆ ಬಂದ ಅದೃಷ್ಟ ಎಂದರು. ಈ ಹಿಂದೆಮ್ಮೊ ಸುದೀಪ್ ಬ್ಲಡೀ ಫಕ್ಕರ್ಸ್! ನಾನ್ಯಾಕ್ರಿ ಇನ್ನೊಬ್ರ ಹೆಸರಿಟ್ಟುಕೊಳ್ಳಲಿ! ಎಂದದ್ದನ್ನು ಇಲ್ಲಿ ಧಾರಾಳವಾಗಿ ಸ್ಮರಿಸಬಹುದು. ಬಳಿಕ ಅವರು ಅಲ್ಲಿಂದ ಹೊಸಪೇಟೆಗೆ ಹೊರಟರು. (ಏಜೆನ್ಸೀಸ್)


Click it and Unblock the Notifications











