Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಬ್ಬಳ್ಳಿ ಬೆಡಗಿ ರೆಜೀನಾ ಗಾಂಧಿನಗರಕ್ಕೆ ರೀ ಎಂಟ್ರಿ
ಹುಬ್ಬಳ್ಳಿ ಬೆಡಗಿ ರೆಜೀನಾ ಮತ್ತೊಮ್ಮೆ ಗಾಂಧಿನಗರದ ಬಾಗಿಲು ತಟ್ಟಿದ್ದಾರೆ. ಭರವಸೆಯ ನಿರ್ದೇಶಕ ಕೆ ಎಂ ಚೈತನ್ಯ (ಆ ದಿನಗಳು) ಅವರ 'ಸೂರ್ಯಕಾಂತಿ' ಚಿತ್ರ ರಗ್ಗು ಹೊದ್ದುಕೊಂಡು ತಾಚಿಕೊಂಡ ಮೇಲೆ ರೆಜೀನಾ ನಾಪತ್ತೆಯಾಗಿದ್ದರು. ಎರಡು ವರ್ಷಗಳ ಗ್ಯಾಪ್ನ ಬಳಿಕ ಇದೀಗ ಎರಡನೆ ಇನ್ನಿಂಗ್ಸ್ ಗೆ ಅಣಿಯಾಗಿದ್ದಾರೆ.
ಡಬಲ್ ಗುಳಿಕೆನ್ನೆ ಸುಂದರ ದಿಗಂತ್ ಚಿತ್ರದ ನಾಯಕ ನಟ. ಎಂ.ಎಸ್ಸಿ ಪದವೀಧರ ಸುಧಾಕರ್ ಆಕ್ಷನ್, ಕಟ್ ಹೇಳುತ್ತಿರುವ ಈ ಚಿತ್ರಕ್ಕೆ 'ಸ್ಪಂದನ' ಎಂದು ಹೆಸರಿಡಲಾಗಿದೆ. ಓಂ ಪ್ರಕಾಶ್ ರಾವ್, ಸುನಿಲ್ ಕುಮಾರ್ ದೇಸಾಯಿ, ರಾಜಶೇಖರ್ ಮುಂತಾದ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಸುಧಾಕರ್ ಅವರಿಗಿದೆ.
ಚಂದಾಪುರದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್ ಎಸ್ ನಾರಾಯಣಸ್ವಾಮಿ ಚಿತ್ರದ ನಿರ್ಮಾಪಕ. 'ಸ್ಪಂದನ' ಚಿತ್ರ ಲವ್ ಸ್ಟೋರಿಯಾಗಿದ್ದು ಮನರಂಜನೆಯ ಅಂಶಗಳು ಸಾಕಷ್ಟು ಇವೆಯಂತೆ. ತಾರಾಬಳಗದಲ್ಲಿ ಅನಂತನಾಗ್, ಸುಧಾ ಬೆಳವಾಡಿ, ಅಶೋಕ್, ಶರಣ್ ಮುಂತಾದವರಿದ್ದಾರೆ.
ಚಿತ್ರಕ್ಕೆ ಸಂಗೀತ ಎ ಎಂ ನೀಲ್ ಅವರದು. ಜನಪ್ರಿಯ ಗೀತ ಸಾಹಿತಿ ದೊಡ್ಡ ರಂಗೇಗೌಡರು ಈ ಚಿತ್ರಕ್ಕಾಗಿ ದೇಶಭಕ್ತಿ ಗೀತೆಯೊಂದನ್ನು ರಚಿಸಿಕೊಟ್ಟಿರುವುದು ವಿಶೇಷ. ರೆಜೀನಾ ಅಭಿನಯಿಸುತ್ತಿರುವ ಎರಡನೆ ಚಿತ್ರವಿದು. ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ರೀ ಎಂಟ್ರಿಕ್ ಕೊಡುತ್ತಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)