twitter
    For Quick Alerts
    ALLOW NOTIFICATIONS  
    For Daily Alerts

    ಲೀಲಾವತಿ ತೋಟಕ್ಕೆ ಬೆಂಕಿಯಿಟ್ಟವ ಸಿಕ್ಕಿಬಿದ್ದ

    By Srinath
    |

    fire-leelavathi-farm-nelamangala-neighbour-held
    ಬೆಂಗಳೂರು,ಫೆ. 22: ವಾರ್ಷಿಕ ಕಾರ್ಯದಂತೆ ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ನಟಿ ಲೀಲಾವತಿ ಹಾಗೂ ಅವರ ಪುತ್ರ, ನಟ ವಿನೋದ್ ರಾಜ್ ತೋಟ ಬೆಂಕಿಗೆ ಆಹುತಿಯಾಗುತ್ತಿರುವುದು ಅನೇಕ ಊಹಾಪೋಹಗಳಿಗೆ ಕಾರಣವಾಗಿತ್ತು. ಕಳೆದ ವಾರವೂ (ಫೆ.19) ಈ ವರ್ತನೆ ಪುನರಾವರ್ತನೆಯಾಗಿತ್ತು.

    'ಕಿಡಿ'ಗೇಡಿ: ಇದೀಗ ದುಃಖದ ಮಡುವಿನಲ್ಲಿದ್ದ ಅಮ್ಮ-ಮಗ ಜೋಡಿಗೆ ಮತ್ತು ಅವರ ಅಭಿಮಾನಿ ದೇವರುಗಳಿಗೆ ಒಂದಷ್ಟು ಸಮಾಧಾನ ತರುವಂತಹ ಸುದ್ದಿಯೊಂದು ಬಂದಿದೆ. ಲೀಲಾವತಿ ತೋಟಕ್ಕೆ ಬೆಂಕಿಹಚ್ಚುತ್ತಿದ್ದ ದುರುಳ ಪತ್ತೆಯಾಗಿದ್ದು, ಅವನನ್ನು ಮಂಜುನಾಥ ಎಂದು ಗುರುತಿಸಲಾಗಿದೆ. ಇವ ಮೈಲನಹಳ್ಳಿ ನಿವಾಸಿ. ಇವ ಬೇರಾರು ಅಲ್ಲ. ಲೀಲಾವತಿ ತೋಟದ ಪಕ್ಕದಲ್ಲೇ ಇರುವ ತೋಟದ ಮಾಲೀಕ.

    ಕಳೆದ ವಾರ ತಮ್ಮ ತೋಟಕ್ಕೆ ಬೆಂಕಿ ಬೀಳುತ್ತಿದ್ದಂತೆ ವಿನೋದ್ ರಾಜ್ ಥೇಟ್ ಸಿನಿ ಶೈಲಿಯಲ್ಲಿ ಕಣಕ್ಕಿಳಿದಿದ್ದರು. 'ಕಿಡಿ'ಗೇಡಿಯನ್ನು ಹಿಡಿಯಲು ಮುಂದಾದ ವಿನೋದ್ ರಾಜ್ ಕೈಗೆ ಸಿಕ್ಕಿಬಿದ್ದಿದ್ದು ಮಂಜುನಾಥ. ತಕ್ಷಣ ಆತನನ್ನು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಮಂಜುನಾಥನನ್ನು ಈಗ ವಿಚಾರಿಸುತ್ತಿದ್ದಾರೆ.

    English summary
    Kannada actor Vinod Raj, son of veteran actress Leelavathi, has finally nabbed the man who had been setting fire to his mother’s farm house at Sooladevanahalli in Nelamangala.The accused has been identified as Manjunath, a resident of Mylanahalli. Manjunath is said to be the owner of the neighbouring farm.
    Wednesday, February 22, 2012, 12:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X