Don't Miss!
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿಕಾರಿ ಕೈತಪ್ಪಿದ್ದಕ್ಕೆ ಶಾನೆ ಬೇಜಾರಾದ ಹರಿಪ್ರಿಯಾ
ತಮಿಳು, ತೆಲುಗು ಚಿತ್ರರಂಗದಲ್ಲಿ ಪುರುಸೋತ್ತಿಲ್ಲದಂತೆ ನಟಿಸುತ್ತಿರುವ ಹರಿಪ್ರಿಯಾ ಶಾನೆ ಬೇಜಾರು ಮಾಡಿಕೊಂಡಿದ್ದಾರೆ. ಮಲಯಾಳಂ ನಟ ಮಮ್ಮೂಟ್ಟಿ ಜೊತೆ 'ಶಿಕಾರಿ' ಚಿತ್ರದಲ್ಲಿ ನಟಿಸುವ ಅವಕಾಶ ಕೈತಪ್ಪಿರುವುದೇ ಈ ಪಶ್ಚಾತ್ತಾಪ ಕಾರಣವಂತೆ.
ಹರಿಪ್ರಿಯಾಗೆ ಡೇಟ್ಸ್ ಸಿಗದ ಕಾರಣ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಅಭಯ ಸಿಂಹ ನಿರ್ದೇಶಿಸುತ್ತಿರುವ 'ಶಿಕಾರಿ'ಯಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲವಂತೆ. ಸದ್ಯಕ್ಕೆ ತಮಿಳಿನಲ್ಲಿ ಚೇರನ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಶಿಕಾರಿ ಚಿತ್ರ ಹಾಗೂ ಚೇರನ್ ಚಿತ್ರದ ಡೇಟ್ಸ್ ಸರಿಹೊಂದಾಣಿಕೆಯಾಗಾ ಕಾರಣ ಶಿಕಾರಿಯನ್ನು ಕೈಬಿಡಬೇಕಾಗಿದೆ.
ಅಭಯ ಸಿಂಹ ಅವರ ಸ್ಕ್ರಿಪ್ಟ್ ಇಷ್ಟವಾಗಿತ್ತು. ಮಮ್ಮೂಟ್ಟಿ ಅವರು ಚಿತ್ರದಲ್ಲಿ ಅಭಿನಯಿಸುತ್ತಿರುವುದು ಚಿತ್ರಕ್ಕೆ ಹೊಸ ಕಳೆ ಬಂದಿತ್ತು. ಆದರೆ ಏನು ಮಾಡುವುದು ಶಿಕಾರಿಗೆ ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ ಎಂದಿದ್ದಾರೆ. ಮುಂದೊಂದು ದಿನವಾದರೂ ಮಮ್ಮುಟ್ಟಿ ಜೊತೆ ನಟಿಸುವ ಅವಕಾಶ ಸಿಗಲಿ ಎಂದು ಹರಿಪ್ರಿಯಾ ಹರಕೆ ಹೊತ್ತಿದ್ದಾರೆ.
ಮಲಯಾಳಂನಲ್ಲಿ ಮಮ್ಮುಟ್ಟಿ ಜೊತೆ ನಟಿಸಬೇಕು ಎಂಬುದು ಹರಿಪ್ರಿಯಾ ಹಂಬಲ. ಸದ್ಯಕ್ಕೆ ಈ ಪ್ರಯತ್ನದಲ್ಲಿರುವ ಹರಿಪ್ರಿಯಾ ಮಲಯಾಳಂ ಚಿತ್ರರಂಗದೊಂದಿಗೆ ಮಾತುಕತೆ ನಡೆಸುತ್ತಿದ್ದಾರಂತೆ. ಏತನ್ಮಧ್ಯೆ ಕನ್ನಡದಲ್ಲಿ ಒಪ್ಪಿಕೊಂಡಿದ್ದ ಶ್ರೀಮುರಳಿ ಜೊತೆಗಿನ 'ನಾನೇ' ಚಿತ್ರದ ಚಿತ್ರೀಕರಣ ಮುಗಿದಿದೆ. ಉಳಿದಂತೆ ಯಾವುದೇ ಹೊಸ ಚಿತ್ರಕ್ಕೆ ಹರಿಪ್ರಿಯಾ ಸಹಿಹಾಕಿಲ್ಲವಂತೆ. ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿದ ಬಳಿಕವಷ್ಟೆ ಮುಂದಿನ ನಿರ್ಧಾರ ಎನ್ನುತ್ತಾರೆ.