Don't Miss!
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಜನಿಕಾಂತ್ಗೆ ಜಪಾನ್ ಪ್ರಧಾನಿ ನ್ಯಾಟೊ ಕಾನ್ ಆಹ್ವಾನ
ಜಪಾನ್ ಸುನಾಮಿ ಸಂತ್ರಸ್ತರಿಗಾಗಿ ನಟ ರಜನಿಕಾಂತ್ ಸಹಾಯ ಹಸ್ತ ಚಾಚಿದ್ದು ಗೊತ್ತೇ ಇದೆ. ಸುನಾಮಿ ವಿಪತ್ತಿನಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇತ್ತೀಚೆಗೆ ರಜನಿಕಾಂತ್ ಸಂತಾಪಸೂಚಕ ಸಭೆ ನಡೆಸಿದರು. ಆಗ ಅವರು ಮಾತನಾಡುತ್ತಾ, ಜಪಾನ್ ಪ್ರಧಾನಿ ನ್ಯಾಟೊ ಕಾನ್ ಅವರು ತಮ್ಮನ್ನು ಜಪಾನ್ಗೆ ಆಹ್ವಾನಿಸಿರುವುದಾಗಿ ತಿಳಿಸಿದ್ದಾರೆ.
ಆದರೆ ರಜನಿಕಾಂತ್ ಜಪಾನ್ಗೆ ಭೇಟಿ ನೀಡುತ್ತಾರೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಜಪಾನ್ನಲ್ಲಿ ರಜನಿಕಾಂತ್ ಅವರಿಗೆ ಅಪಾರ ಅಭಿಮಾನಿಗಳಿದ್ದು ಅವರೆಲ್ಲಾ ಸೂಪರ್ ಸ್ಟಾರನ್ನು ಎದುರು ನೋಡುವಂತಾಗಿದೆ. ಏತನ್ಮಧ್ಯೆ ಸುನಾಮಿ ದಾಳಿಗೆ ತುತ್ತಾದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿ ಪತ್ರವೊಂದನ್ನು ಜಪಾನ್ ಪ್ರಧಾನಿಗೆ ಕಳುಹಿಸಲಾಗಿದೆ.
ಸುನಾಮಿ ಸಂತ್ರಸ್ತರನ್ನು ರಕ್ಷಿಸಲು ರಜನಿ ಈಗಾಗಲೆ ಮುಂದಾಗಿದ್ದು ಚೆನ್ನೈನ ಕಚೇರಿಯಿಂದ ಜಪಾನಿಯರಿಗೆ ನೆರವು ನೀಡಲಿದ್ದಾರೆ. ಮನೆ ಮಠ ಕಳೆದುಕೊಂಡವರಿಗೆ ಸಹಾಯ ಮಾಡಲು ರಜನಿ ಚಿತ್ರೋದ್ಯಮದವನ್ನು ಮನವಿ ಮಾಡಿಕೊಂಡಿದ್ದಾರೆ. ತಮ್ಮದೇ ಆದ ಒಂದು ತಂಡ ರಚಿಸಿ ಅವರನ್ನು ಜಪಾನಿಗೆ ಕಳುಹಿಸಿಕೊಡುವ ಯೋಚನೆಯೂ ರಜನಿ ತಲೆಯಲ್ಲಿದೆ.