Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಜನಿಕಾಂತ್ಗೆ ಜಪಾನ್ ಪ್ರಧಾನಿ ನ್ಯಾಟೊ ಕಾನ್ ಆಹ್ವಾನ
ಜಪಾನ್ ಸುನಾಮಿ ಸಂತ್ರಸ್ತರಿಗಾಗಿ ನಟ ರಜನಿಕಾಂತ್ ಸಹಾಯ ಹಸ್ತ ಚಾಚಿದ್ದು ಗೊತ್ತೇ ಇದೆ. ಸುನಾಮಿ ವಿಪತ್ತಿನಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇತ್ತೀಚೆಗೆ ರಜನಿಕಾಂತ್ ಸಂತಾಪಸೂಚಕ ಸಭೆ ನಡೆಸಿದರು. ಆಗ ಅವರು ಮಾತನಾಡುತ್ತಾ, ಜಪಾನ್ ಪ್ರಧಾನಿ ನ್ಯಾಟೊ ಕಾನ್ ಅವರು ತಮ್ಮನ್ನು ಜಪಾನ್ಗೆ ಆಹ್ವಾನಿಸಿರುವುದಾಗಿ ತಿಳಿಸಿದ್ದಾರೆ.
ಆದರೆ ರಜನಿಕಾಂತ್ ಜಪಾನ್ಗೆ ಭೇಟಿ ನೀಡುತ್ತಾರೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಜಪಾನ್ನಲ್ಲಿ ರಜನಿಕಾಂತ್ ಅವರಿಗೆ ಅಪಾರ ಅಭಿಮಾನಿಗಳಿದ್ದು ಅವರೆಲ್ಲಾ ಸೂಪರ್ ಸ್ಟಾರನ್ನು ಎದುರು ನೋಡುವಂತಾಗಿದೆ. ಏತನ್ಮಧ್ಯೆ ಸುನಾಮಿ ದಾಳಿಗೆ ತುತ್ತಾದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿ ಪತ್ರವೊಂದನ್ನು ಜಪಾನ್ ಪ್ರಧಾನಿಗೆ ಕಳುಹಿಸಲಾಗಿದೆ.
ಸುನಾಮಿ ಸಂತ್ರಸ್ತರನ್ನು ರಕ್ಷಿಸಲು ರಜನಿ ಈಗಾಗಲೆ ಮುಂದಾಗಿದ್ದು ಚೆನ್ನೈನ ಕಚೇರಿಯಿಂದ ಜಪಾನಿಯರಿಗೆ ನೆರವು ನೀಡಲಿದ್ದಾರೆ. ಮನೆ ಮಠ ಕಳೆದುಕೊಂಡವರಿಗೆ ಸಹಾಯ ಮಾಡಲು ರಜನಿ ಚಿತ್ರೋದ್ಯಮದವನ್ನು ಮನವಿ ಮಾಡಿಕೊಂಡಿದ್ದಾರೆ. ತಮ್ಮದೇ ಆದ ಒಂದು ತಂಡ ರಚಿಸಿ ಅವರನ್ನು ಜಪಾನಿಗೆ ಕಳುಹಿಸಿಕೊಡುವ ಯೋಚನೆಯೂ ರಜನಿ ತಲೆಯಲ್ಲಿದೆ.