Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೇಡ್ರಳ್ಳಿ ಇನ್, ಒಂದೇ ಒಂದು ಸಾರಿ ಸಿನಿಮಾ ಔಟ್
ಇನ್ನೇನು ಎತ್ತಂಗಡಿಗಾಗಿ ಕಾದಿರುವ ಅಭಿಜಿತ್ ಅಭಿನಯದ 'ವಿಷ್ಣು' ಚಿತ್ರದ ಜೊತೆಗೆ ಸ್ಪರ್ಧೆಗೆ ಬಿದ್ದಿದ್ದ 'ಒಂದೇ ಒಂದು ಬಾರಿ' ಚಿತ್ರ ಎತ್ತಂಗಡಿಯಾಗಿದೆ. ಅನುಪಮ ಚಿತ್ರಮಂದಿರಕ್ಕೆ ಮತ್ತೊಂದು ಚಿತ್ರ 'ಜೇಡ್ರಳ್ಳಿ' ಎಂಟ್ರಿ ಕೊಟ್ಟಿದೆ. ಒಂದೇ ಒಂದು ಬಾರಿ ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಎರಡೆರಡು ಬಾರಿ sorry ಹೇಳಿದ್ದಾರೆ.
ಒಂದೇ ಒಂದು ಸಾರಿ ಚಿತ್ರದ್ದೂ ಸಾದಾಸೀದಾ ಕತೆ. ಒಬ್ಬ ಯುವತಿಗಾಗಿ ಮೂವರು ಪ್ರೇಮಿಗಳ ನಡುವೆ ಸ್ಪರ್ಧೆ ನಡೆಯುತ್ತದೆ. ಕಡೆಗೆ ಈ ತ್ರಿಕೋನ ಪ್ರೇಮಕತೆ ಎತ್ತ ಸಾಗುತ್ತದೆ ಎಂಬುದೇ ಅರ್ಥವಾಗದೆ ಪ್ರೇಕ್ಷಕರು ಹೈರಾಣಾಗುತ್ತಾರೆ. ಕತ್ತಲಲ್ಲಿ ಚಿತ್ರಮಂದಿರದ ಬಾಗಿಲು ಕಾಣದೆ ಪ್ರೇಕ್ಷಕ ಪ್ರಭುಗಳು ಪರದಾಡುವಂತಾಗುತ್ತದೆ.
ಪ್ರವೀಣ್ ತೊಕ್ಕೊಟ್ಟು ನಿರ್ದೇಶನದ ಈ ಚಿತ್ರ 'ವಿಷ್ಣು' ಚಿತ್ರದ ಜೊತೆಗೇ ತೆರೆಕಂಡಿತ್ತು. ಕತೆಯಲ್ಲಾಗಲಿ, ಚಿತ್ರಕತೆಯಲ್ಲಾಗಲಿದೆ ಹೊಸತನವಿಲ್ಲದೆ ಪ್ರೇಕ್ಷಕರ ಸಹನೆಯನ್ನು ಚಿತ್ರ ಪದೇ ಪದೇ ಕೆಣಕುವಂತಿದೆ. ಅಭಿನಯ, ಸಂಭಾಷಣೆ, ಸನ್ನಿವೇಶಗಳು ತಾಳಮೇಳವಿಲ್ಲದೆ ಎತ್ತೆತ್ತಲೋ ಸಾಗಿ ಕಡೆಗೆ ಪ್ರೇಕ್ಷಕನಿಗೆ ಮನೆ ದಾರಿ ಕಾಣಿಸುತ್ತದೆ. (ಏಜೆನ್ಸೀಸ್)