Don't Miss!
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- News ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿಮಾನಿಗೆ ಸ್ಪೂರ್ತಿಯಾದ ರಾಜ್ ಕುಮಾರ್
ಡಾ.ರಾಜ್ ಕುಮಾರ್ ಅವರ ಹಾಗೆ ತಾನೂ ಒಬ್ಬ ಮಹಾನ್ ಗಾಯಕನಾಗಬೇಕು ಎಂಬುದು ನಾಯಕನ ಕನಸು. ತಾಯಿಯ ಆಸೆಯೂ ಅದೇ ಆಗಿರುತ್ತದೆ. ಮಗುವಿಗೆ ಜನ್ಮ ಕೊಟ್ಟ ನಂತರ ತನ್ನ್ನಮಗನನ್ನ್ನು ರಾಜ್ ಕುಮಾರ್ ಅವರಂತೆ ಮಹಾನ್ ಗಾಯಕನನ್ನಾಗಿ ಮಾಡಬೇಕು ಎಂದು ತಂದೆಯಿಂದ ಭಾಷೆ ತೆಗೆದುಕೊಂಡು ಪ್ರಾಣಬಿಟ್ಟಿರುತ್ತಾಳೆ. ಆತ ಮಹಾನ್ ಗಾಯಕನಾಗುತ್ತಾನಾ ಇಲ್ಲವೆ ಎಂಬುದು 'ಅಭಿಮಾನಿ' ಚಿತ್ರದ ಕಥಾಹಂದರ. ತಾಯಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತೆ ತಾರಾ, ತಂದೆಯಾಗಿ ಶರತ್ ಬಾಬು ಅಭಿನಯಿಸುತ್ತಿದ್ದಾರೆ. ಮಗನಾಗಿ 'ನನ್ನುಸಿರೇ' ಚಿತ್ರದ ರಾಹುಲ್ ಕಾಣಿಸಲಿದ್ದಾರೆ.
'ಅಭಿಮಾನಿ' ಚಿತ್ರದ ಕಥೆ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಖುಷಿಯಾಗಿಸಿದೆ. ಚಿತ್ರದ ನಾಯಕ ಮತ್ತು ನಾಯಕಿಯರು ಕನ್ನಡಿಗರೇ ಆಗಿರುವುದು ನನಗೆ ಇನ್ನೂ ಸಂತೋಷವಾಗಿದೆ ಎಂದರು. 'ಅಭಿಮಾನಿ' ಚಿತ್ರ ಯಶಸ್ವಿಯಾಗಲಿ ಎಂದು ಪಾರ್ವತಮ್ಮ ಹಾರೈಸಿದ್ದಾರೆ. ಇಷ್ಟೆಲ್ಲ ಘಟನೆಗಳಿಗೆ ಬೆಂಗಳೂರು ಇಂಟರ್ ನ್ಯಾಷನಲ್ ಹೋಟೆಲ್ ಬುಧವಾರ(ಜ.21) ಸಾಕ್ಷಿಯಾಯಿತು. ಇದೇ ಸಂದರ್ಭದಲ್ಲಿ 'ಅಭಿಮಾನಿ' ಚಿತ್ರದ ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್ ಸಹ ಉಪಸ್ಥಿತರಿದ್ದರು. ಅವರು ಅಭಿಮಾನಿ ಚಿತ್ರದ ಅಂತರ್ಜಾಲ ತಾಣವನ್ನು ಅನಾವರಣಗೊಳಿಸಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)