Just In
Don't Miss!
- News
ನಮ್ಮನ್ನು ಬಿಟ್ಟು ಓಡುತ್ತಿವೆ 500 ನಕ್ಷತ್ರಗಳು, ವಿಜ್ಞಾನಿಗಳಿಂದ ರಹಸ್ಯ ರಿವೀಲ್..!
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾರೆವ್ಹಾ ಕಳ್ ಮಂಜ ಕೋಮಲ್ ಕುಮಾರ್ !
ಊರೆಲ್ಲಾ ಒದ್ದಾಡಿ, ಅಂತೂ ಕೊನೆಗೂ ತಮ್ಮ ಎರಡನೇ ಮದುವೆ ಚಿತ್ರವನ್ನು ಗೆಲ್ಲಿಸಿಕೊಂಡಿರುವ ನಿರ್ಮಾಪಕ ಸುರೇಶ್ ಸದ್ದಿಲ್ಲದೇ ಕೋಮಲ್ ಚಿತ್ರವೊಂದನ್ನು ಶುರುಮಾಡಿರುವುದು ಗೊತ್ತೇ ಇದೆ. ಅದೇ ಚಿತ್ರದ ಶೂಟಿಂಗ್ ಈಗ ಆರಂಭಗೊಂಡಿದೆ. ಚಿತ್ರದ ಹೆಸರು ಗೋವಿಂದಾಯನಮಃ!
ಸುರೇಶ್ ಪಕ್ಕಾ ಬಿಜಿನೆಸ್ಮನ್. ಎಲ್ಲಿಂದ, ಯಾರು ಯಾರಿಂದ ಏನೇನು ಕೆಲಸ ತೆಗೆಸಬೇಕು? ಎಲ್ಲಿ ಲಾಕ್ ಮಾಡಿದರೆ ಏನಾಗುತ್ತದೆ ಎನ್ನುವುದನ್ನು ಅರೆದುಕುಡಿದಿರುವ ವ್ಯಕ್ತಿ. ಎರಡನೇ ಮದುವೆ ಚಿತ್ರದಲ್ಲಿ ಕುಮಾರಸ್ವಾಮಿ ರಾಧಿಕಾ ಮ್ಯಾಟರ್ ಇದೆ ಎಂಬ ಬಾಂಬ್ ಹಾಕಿ, ಯಡಿಯೂರಪ್ಪನವರನ್ನೇ ಕೆರಳಿಸಿದ ಅಸಾಮಾನ್ಯ.
ಆ ಚಿತ್ರವನ್ನು ಆ ಮಟ್ಟಕ್ಕೆ ಹಿಟ್ ಆಗಲು ಕಾರಣ ಅವರಿಗಿದ್ದ ಸಿನಿಮಾ ಪ್ರೀತಿ ಮತ್ತು ಬಿಜಿನೆಸ್ ಮೈಂಡು. ಸತತ ಐದಾರು ಚಿತ್ರಗಳಿಂದ ಹೊಡೆತ ತಿಂದಿದ್ದ ದಿನೇಶ್ ಬಾಬುಗೆ ದೊಡ್ಡದಾಗಿ ಬ್ರೇಕ್ ಸಿಕ್ಕಿದ್ದು "ಎರಡನೇ ಮದುವೆ"ಯಲ್ಲಿ! ಸುರೇಶ್ ಆ ಚಿತ್ರವನ್ನು ಎಷ್ಟು ಸಾರಿ ಕರೆಕ್ಷನ್ ಮಾಡಿ, ರೀ ಶೂಟ್ ಮಾಡಿಸಿದ್ದಾರೆ ಎನ್ನುವುದನ್ನು ಆ "ಗುರುಪ್ರಸಾದ"ನೇ ಬಲ್ಲ!
ಕೋಮಲ್ಗೆ ಎಷ್ಟು ಮಾರುಕಟ್ಟೆ ಇದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಕಿರುತೆರೆಯಲ್ಲಿ ಬಂದ ವಾರೆವ್ವಾ ಚಿತ್ರ. 42 ಜಿಆರ್ಪಿ ರೇಟಿಂಗ್ ಈ ಚಿತ್ರಕ್ಕೆ ಬಂದಿದೆ. ಅಂದರೆ ಇತ್ತೀಚಿನ ದಿನಗಳಲ್ಲಿ ಈ ಮಟ್ಟದಲ್ಲಿ ವೀಕ್ಷಕರನ್ನು ಕಟ್ಟಿ ಕೂರಿಸಿದ್ದು ಆಪ್ತರಕ್ಷಕ. ಅದನ್ನು ಬಿಟ್ಟರೆ ವಾರೆವ್ಹಾ.
ಸ್ವತಃ ಆ ಚಿತ್ರದ ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಈ ವಿಷಯ ಕೇಳಿ ಬೆಚ್ಚಿಬಿದ್ದಿದ್ದಾರೆ. ಹೀಗೆಂದು ಗೊತ್ತಿದ್ದರೆ ಥಿಯೇಟರ್ ಗೋಜಿಗೆ ಹೋಗದೆ ಟೀವಿಯಲ್ಲೇ ರಿಲೀಜ್ ಮಾಡಿ ಐವತ್ತು ಲಕ್ಷ ಉಳಿಸಿಕೊಳ್ಳುತ್ತಿದ್ದೆ ಎಂದು ಸಿಂಗಮ್ಮ ಸಿಂಗ್ರಿ ಕಾಮೆಂಟ್ಸ್ ಮಾಡಿದ್ದಾರೆ! (ದಟ್ಸ್ಕನ್ನಡ ಸಿನಿವಾರ್ತೆ)