Don't Miss!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಗಲೋ ಈಗಲೋ ಎತ್ತಂಗಡಿಯಾಗಲಿದೆ 'ವಿಷ್ಣು'
ಇದು ಲೇಟೆಸ್ಟ್ ಗಾಂಧಿನಗರದ ಬಾಕ್ಸಾಫೀಸ್ ರಿಪೋರ್ಟ್. ಇನ್ನು ಬಿಡುಗಡೆಯಾಗಿ ಒಂದು ವಾರವೂ ಕಳೆದಿಲ್ಲ ಆಗಲೆ ಬಣಬಣ ಎನ್ನುತ್ತಿದೆ 'ವಿಷ್ಣು' ಚಿತ್ರ. ಪ್ರೇಕ್ಷಕರಿಲ್ಲದೆ ಚಿತ್ರ ಇನ್ನೇನು ಆಗಲೋ ಈಗಲೋ ಎತ್ತಂಗಡಿಯಾಗುವ ಹಂತ ತಲುಪಿದೆ. ಸಾಧ್ಯವಾದರೆ ಒಮ್ಮೆ ನೋಡಿ 'ಅನುಭವಿಸಿ' ಎನ್ನುತ್ತವೆ ಮೂಲಗಳು.
ಚಿತ್ರದ ಹೆಸರು ನೋಡಿ ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕರ ಪಾಡು ಇಂಗುತಿಂದ ಮಂಗನಂತಾಗಿತ್ತು ಎಂಬುದು ಕೆಲವರ ಅಭಿಪ್ರಾಯ. ಪ್ರೇಕ್ಷಕರು ಕೊನೆಯ ತನಕ ಚಾತಕ ಪಕ್ಷಿಯಂತೆ ಎದುರು ನೋಡಿದರೂ ಚಿತ್ರದಲ್ಲಿ ಎಲ್ಲೂ ಸಾಹಸ ಸಿಂಹ ವಿಷ್ಣುವರ್ಧನ ಕಾಣಸಿಗಲ್ಲ.
ಈ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನರಿಗೆ ಸಂಬಂಧಿಸಿದ ಒಂದೇ ಒಂದು ಎಳೆಯೂ ಇಲ್ಲ. ಹೋಗಲಿ ಚಿತ್ರದಲ್ಲಿ ಮನಸ್ಸಿಗೆ ಮುದನೀಡುವ ಸನ್ನಿವೇಶಗಳು ಇವೆಯೇ ಎಂದರೆ, ಅದೂ ಇಲ್ಲ. ಒಂದು ವೇಳೆ ಈ ಚಿತ್ರವನ್ನು ಸಾಹಸಸಿಂಹ ವಿಷ್ಣುವರ್ಧನ್ ಕಣ್ಮರೆಯಾದಾಗ ಬಿಡುಗಡೆ ಮಾಡಿದ್ದಿದ್ದರೆ ಅದರ ಕತೆಯೇ ಬೇರೆ ಇರುತ್ತಿತ್ತು. ಕನಿಷ್ಠ ನಾಲ್ಕು ವಾರಗಳ ಕಾಲವಾದರೂ ಓಡುತ್ತಿತ್ತು ಎಂಬ ಮಾತುಗಳು ಕೇಳಿಬಂದಿವೆ. ಅಭಿಜಿತ್ ಪೋಷಿಸಿರುವ ವಿಷ್ಣು ಪಾತ್ರ ಪೇಲವವಾಗಿದೆ.
ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರುವ ಅಭಿಜಿತ್ ಅವರದು ಚಿತ್ರದಲ್ಲಿ ದ್ವಿಪಾತ್ರಾಭಿನಯ. ಪೂನಂ, ಕ್ಯಾಥರಿನ್, ಸತ್ಯಪ್ರಕಾಶ್, ಗೀತಾ, ಶರತ್ ಲೋಹಿತಾಶ್ವ, ಆಶಿಷ್ ವಿದ್ಯಾರ್ಥಿ, ಬುಲೆಟ್ ಪ್ರಕಾಶ್, ರವಿಶಂಕರ್ರಂತಹ ಅದ್ಭುತ ನಟರಿದ್ದರೂ ಪ್ರೇಕ್ಷಕರನ್ನು ಸೆಳೆಯುವ ಅಂಶಗಳು ಇಲ್ಲದೆ ಚಿತ್ರ ಎತ್ತಂಗಡಿಯಾಗುವ ಹಂತ ತಲುಪಿದೆ. (ಒನ್ಇಂಡಿಯಾ ಕನ್ನಡ)