Don't Miss!
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- News 140 ಕೋಟಿ ಜನ ನಿಮ್ಮನ್ನು ತಿರಸ್ಕರಿಸಿರುವುದರಲ್ಲಿ ಅಚ್ಚರಿ ಏನಿಲ್ಲ: ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಟೀಕೆ
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಳ್ಳಿತೆರೆಗೆ ಗಾಡ್ ಫಾದರ್ ಮುತ್ತಪ್ಪ ರೈ ಪದಾರ್ಪಣೆ
ಸಮಾಜ ಸೇವಕ, ಜಯ ಕರ್ನಾಟಕ ಕನ್ನಡ ಸಂಘಟನೆ ಸ್ಥಾಪಕ ಮುತ್ತಪ್ಪ ರೈ ಬೆಳ್ಳಿತೆರೆಗೆ ಅಡಿಯಿಡಲು ಮುಂದಾಗಿದ್ದಾರೆ. ಈ ಹಿಂದೆ ಅವರಿಗೆ ಚಿತ್ರದಲ್ಲಿ ನಟಿಸಲು ಸಾಕಷ್ಟು ಬಾರಿ ಕರೆ ಬಂದಿತ್ತು. ಆದರೆ ಅವರು ಯಾಕೋ ಏನೋ ಮನಸ್ಸು ಮಾಡಿರಲಿಲ್ಲ. ಈಗ ತುಳು ಚಿತ್ರವೊಂದರಲ್ಲಿ ನಟಿಸಲು ಮನಸ್ಸು ಮಾಡಿದ್ದಾರೆ . ಚಿತ್ರದ ಹೆಸರು 'ಕಂಚಿಲ್ದ ಬಾಲೆ'.
ಈ ಚಿತ್ರವನ್ನು ಕುಂಬ್ರ ರಘುನಾಥ ರೈ ನಿರ್ಮಿಸುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಚಿತ್ರದಲ್ಲಿ ಮುತ್ತಪ್ಪ ರೈ ಅವರದು ಅತಿಥಿ ಪಾತ್ರ. ಒಂದೆರಡು ದೃಶ್ಯಗಳಲ್ಲಿ ಅವರು ಕಾಣಿಸಲಿದ್ದಾರೆ. ಊರಿನ ಆಸ್ಪತ್ರೆಗೆ ಶಂಕು ಸ್ಥಾಪನೆ ಮಾಡಿ ತುಳುನಾಡಿನ ಬಗ್ಗೆ ಭಾಷಣ ಮಾಡುವ ಪಾತ್ರ.
ಪಾತ್ರ ಸಣ್ಣದಾದರೂ ಹೆಚ್ಚು ಮಹತ್ವವುಳ್ಳದು ಎನ್ನುತ್ತಾರೆ ರಘುನಾಥ್. ಇದೊಂದು ಭಕ್ತಿ ಪ್ರಧಾನವಾದ ಚಿತ್ರ.ಮೊದಲು ನಟಿಸುವುದಾದರೆ ತುಳು ಚಿತ್ರದಲ್ಲೇ ನಟಿಸಬೇಕು ಅಂದುಕೊಂಡಿದ್ದೆ. ತುಳು ನನ್ನ ಮಾತೃ ಭಾಷೆ ಕೂಡ. 'ಕಂಚಿಲ್ದ ಬಾಲೆ' ಚಿತ್ರದ ಕತೆ ಇಷ್ಟವಾಯಿತು . ಹಾಗಾಗಿ ನಟಿಸಲು ಒಪ್ಪಿದೆ ಎನ್ನುತ್ತಾರೆ ರೈ.
ಮುಂದೆ ಬರುವ ಎಲ್ಲಾ ಆಫರ್ಗಳನ್ನು ಒಪ್ಪಿಕೊಳ್ಳಲು ಮುತ್ತಪ್ಪ ರೈ ಸಿದ್ಧರಿಲ್ಲವಂತೆ. ಕತೆ ಇಷ್ಟವಾಗಿ ನಟಿಸಬೇಕು ಅನ್ನಿಸಿದರೆ ಮಾತ್ರ ಬಣ್ಣ ಹಚ್ಚಿಕೊಳ್ಳುವುದಾಗಿ ಮುತ್ತಪ್ಪ ರೈ ಹೇಳಿದ್ದಾರೆ. ಮುಂದೊಂದು ದಿನ ತಮ್ಮ ಬದುಕಿನ ಚಿತ್ರಣವನ್ನು ತೆರೆಗೆ ತರುವ ಆಸೆ ಮುತ್ತಪ್ಪ ರೈ ಅವರಿಗಿದೆ.