ಅಮ್ಮನ ಜೊತೆಯಲ್ಲೇ ಇನ್ನು ಚಿತ್ರೀಕರಣಕ್ಕೆ ನಿಖಿತಾ
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರಂತೆ ಎಂಬಂತೆ ನಟ ದರ್ಶನ್ ಪ್ರಕರಣದಲ್ಲಿ ಹೆಚ್ಚು ಸುದ್ದಿಯಾಗಿದ್ದು ನಟಿ ನಿಖಿತಾ. ನಟಿ ನಿಖಿತಾಗೂ ದರ್ಶನ್ಗೂ ಸಂಬಂಧವೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ ಎಂಬ ಮಾತುಗಳು ಇನ್ನೂ ಚಾಲ್ತಿಯಲ್ಲಿವೆ. ಅವು ಎಷ್ಟು ನಿಜವೋ ಎಷ್ಟು ಸುಳ್ಳೋ ನಿಖಿತಾಗೆ ಗೊತ್ತಾಗಬೇಕು.
ಮದುವೆಯಾದ ನಾಯಕ ನಟರ ಜೊತೆ ಮಾತನಾಡಬಾರದು ಎಂದೇನು ಇಲ್ಲ. ಅವರ ಜೊತೆ ಮಾತನಾಡಿದರೆ ತಪ್ಪೇನು? ಎಂದು ಪ್ರಶ್ನಿಸಿರುವ ನಿಖಿತಾ. ಇನ್ನು ಚಿತ್ರೀಕರಣಕ್ಕೆ ಒಬ್ಬಳೇ ಬರುವುದಿಲ್ಲ. ಜೊತೆಗೆ ಅಮ್ಮನನ್ನು ಕರೆದುಕೊಂಡು ಬರುತ್ತೇನೆ ಎಂದಿದ್ದಾರೆ.
ದರ್ಶನ್ ಜೊತೆ ನಟಿಸುತ್ತಿದ್ದ 'ಕ್ರಾಂತ್ರಿವೀರ ಸಂಗೊಳ್ಳಿ ರಾಯಣ್ಣ' ಚಿತ್ರೀಕರಣ ಸ್ಥಳಕ್ಕೆ ಅಮ್ಮ ಬರುತ್ತಿದ್ದರು. ಒಬ್ಬಳೇ ಬಂದರೆ ಈ ರೀತಿ ಅಂತೆಕಂತೆಗಳನ್ನು ಸುದ್ದಿಯನ್ನು ಕಟ್ಟಿ ಊರು ತುಂಬ ಹಬ್ಬಿಸುವ ಮಂದಿ ಇದ್ದಾರೆ. ಇನ್ನು ಮುಂದೆ ಒಬ್ಬಳೇ ಅಂತೂ ಬರಲ್ಲಪ್ಪ ಎಂದಿದ್ದಾರೆ.
More from Filmibeat
English summary
In the future, I will take my mother to all the shooting spots. My mother was with me during the shooting of ‘Krantiveera Sangolli Rayanna’ opposite Darshan says actress Nikita Thukral.


Click it and Unblock the Notifications











