Don't Miss!
- News Big Offer for Bengaluru Voters: ಮತದಾರರಿಗೆ ಗುಡ್ ನ್ಯೂಸ್.. ರಿಯಾಯಿತಿ ದರದಲ್ಲಿ ತಿಂಡಿ ವ್ಯವಸ್ಥೆ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬಿಕಾ, ರಾಧಾ ಮತ್ತೀಗ ಕಾರ್ತಿಕಾ ಪ್ರವೇಶ
80 ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗವನ್ನಾಳಿದ ಅಂಬಿಕಾ, ರಾಧಾ ಸೋದರಿಯರನ್ನು ಯಾರು ಮರೆವರು ಹೇಳಿ. ಈಗ ರಾಧ ಅವರ ಸುಪುತ್ರಿ ಕಾರ್ತಿಕಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ. ಅಮ್ಮ ಹಾಗೂ ದೊಡ್ಡಮ್ಮರಂತೆ ತಾನು ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಳ್ಳುವೆ ಎನ್ನುತ್ತಾ ಗ್ಲಾಮರ್ ಜಗತ್ತಿಗೆ ಪ್ರವೇಶಿಸಿದ್ದಾರೆ.
ತೆಲುಗು ಚಿತ್ರರಂಗದ 'ಪ್ರೇಮ'ನಟ ಅಕ್ಕ್ಕಿನೇನಿ ನಾಗೇಶ್ವರ ರಾವ್ ಅವರ ಮೊಮ್ಮಗ ನಾಗ ಚೈತನ್ಯ ಕೂಡ, ಕಾರ್ತಿಕಾ ಜೊತೆಗೆ ಚಿತ್ರರಂಗದ ಕದ ತಟ್ಟುತ್ತಿದ್ದಾರೆ. ಇಬ್ಬರು ನಟಿಸಿರುವ ತೆಲುಗಿನ ಹೊಸ ಚಿತ್ರ 'ಜೋಶ್' ಗೆ ಹೊಸ ನಿರ್ದೇಶಕ ವಾಸು ವರ್ಮಯನ್ನು ಆಯ್ಕೆ ಮಾಡಿದ್ದಾರೆ ಡಬಲ್ ಹ್ಯಾಟ್ರಿಕ್ ನಿರ್ಮಾಪಕದಿಲ್ ರಾಜ್.ಬೊಮ್ಮರಿಲ್ಲು ಮುಂತಾದ ಯಶಸ್ವಿ ಚಿತ್ರಗಳಿಗೆ ಸಹಾಯಕರಾಗಿದ್ದ ವಾಸು ವರ್ಮಸ್ವತಂತ್ರ ನಿರ್ದೇಶಕರಾಗಿ ಪ್ರಥಮ ಅನುಭವ. ಇನ್ನು ಈಗಾಗಲೆ ಬೊಮ್ಮರಿಲ್ಲು ಹ್ಯಾಪಿ ಡೇಸ್ ಮುಂತಾದ ಯಶಸ್ವಿ ಚಿತ್ರ ನಿರ್ಮಿಸಿ ಡಬಲ್ ಹ್ಯಾಟ್ರಿಕ್ ಗಳಿಕೆ ಮಾಡಿರುವ ನಿರ್ಮಾಪಕರ ಇತ್ತೀಚಿನ ಎರಡು ಚಿತ್ರಗಳು ಹಿಟ್ ಆಗಿರುವುದರಿಂದ ಈ ಚಿತ್ರ ಯಶಸ್ವಿ ಆದರೆ ತ್ರಿಬಲ್ ಡಬಲ್ ಹ್ಯಾಟ್ರಿಕ್ ಗಳಿಸಿದ್ದಂತಾಗುತ್ತದೆ.
ನಾಗಚೈತನ್ಯ [ನಾಗಾರ್ಜುನ ಅವರ ಮೊದಲ ಹೆಂಡತಿ ಲಕ್ಷ್ಮಿ ಅವರ ಮಗ. ಲಕ್ಷ್ಮಿ ನಟ ವೆಂಕಟೇಶ್ ಅವರ ಅಕ್ಕ,. ಖ್ಯಾತ ನಿರ್ಮಾಪಕ ಡಿ. ರಾಮನಾಯ್ಡು ಅವರ ಮಗಳು]ಅಕ್ಕಿನೇನಿ ಕುಟುಂಬದ ಮತ್ತೊಂದು ಪ್ರತಿಭೆ. ತಾತಾ ನಾಗೇಶ್ವರ ರಾವ್, ಅಪ್ಪ ನಾಗಾರ್ಜುನ ಅವರ ಹಾರೈಕೆಯಿಂದ ಈ ಚಿತ್ರದಲ್ಲಿ ಅದ್ಭುತ ಅಭಿನಯ ನೀಡಲು ಎಲ್ಲಾ ತಯಾರಿ ನಡೆಸಿದ್ದಾರೆ. ಇತ್ತ ಕಾರ್ತಿಕಾರಿಗೆ ಕೂಡ ತಾಯಿ ರಾಧಾ,ದೊಡ್ಡಮ್ಮ ಅಂಬಿಕಾ ಕೂಡ ನಟನೆಯ ಕಿವಿಮಾತುಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರಂತೆ. ಈ ಚಿತ್ರದ ಭವಿಷ್ಯದ ಮೇಲೆ ತಮ್ಮ ಮಗಳನ್ನು ಮುಂದೆ ತೆಲುಗು, ತಮಿಳು, ಕನ್ನಡ ಇವುಗಳಲ್ಲಿ ಯಾವ ಚಿತ್ರರಂಗದಲ್ಲಿ ಬೆಳೆಸಬೇಕೆಂದು ರಾಧಾ ನಿರ್ಧರಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.