Don't Miss!
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- News Samsung: ಮಾರುಕಟ್ಟೆ ಗ್ರ್ಯಾಂಡ್ ಎಂಟ್ರಿ ನೀಡಿದೆ ನ್ಯೂ ಫೋನ್
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಧಿಕಾ ಹುಚ್ಚಿನಲ್ಲಿ ಬಿದ್ದ ರಾಮನಗರ ವೆಂಕಟೇಶ!
ನಟಿ ರಾಧಿಕಾ ಮತ್ತೆ ಸುದ್ದಿಯಾಗಿದ್ದಾರೆ! ವೆಂಕಟೇಶ್ ಎಂಬ ಅಭಿಮಾನಿಯೊಬ್ಬ ರಾಧಿಕಾ ಹಿಂದೆ ಬಿದ್ದಿದ್ದಾನೆ. ವಿಶೇಷವೆಂದರೆ ಈತ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರತಿನಿಧಿಸುವ ರಾಮನಗರ ಮೂಲದವನು. ಆದರೆ ರಾಧಿಕಾ ಅವರಿಗೆ ಮಾತ್ರ ಈ ಅಭಿಮಾನಿಯ ಬಗ್ಗೆ ಎಳ್ಳಷ್ಟು ಗೊತ್ತಿಲ್ಲ. ಈತ ಮಾತ್ರ ಮೈಮೇಲೆಲ್ಲಾ ಹಚ್ಚೆ ಹಾಕಿಸಿಕೊಂಡು ರಾಧಿಕಾಗಾಗಿ ಅಲೆದಾಡುತ್ತಿದ್ದಾನೆ.
ವೆಂಕಟೇಶನ ಅಭಿಮಾನವೋ, ಅತಿರೇಕವೋ ರಾಧಿಕಾ ಹೆಸರು ಸೇರಿದಂತೆ ಆಕೆ ಅಭಿನಯಿಸಿದ 25 ಚಿತ್ರಗಳ ಹೆಸರನ್ನು ಮೈತುಂಬಾ ಹಚ್ಚಿ ಹಾಕಿಸಿಕೊಂಡಿದ್ದಾನೆ. ಹೀಗೆ ಹುಚ್ಚಾಪಟ್ಟೆ ಹಚ್ಚೆ ಹಾಕಿಸಿಕೊಳ್ಳಲು ಕಾರಣ ಏನು ಎಂದು ಕೇಳಿದರೆ, ರಾಧಿಕಾ ಅರವನ್ನು ಒಮ್ಮೆಯಾದರೂ ಭೇಟಿಯಾಗಬೇಕು. ಆಕೆಗಾಗಿ ಹುಡುಕಿತ್ತಿದ್ದೇನೆ. ಆಕೆಯ ನಟನೆ ಎಂದರೆ ನನಗೆ ಶಾನೆ ಇಷ್ಟ ಎನ್ನುತ್ತಾನೆ ವೆಂಕಟೇಶ.
ಅಂದಹಾಗೆ ರಾಧಿಕಾ, ಆದಿತ್ಯಾ ಅಭಿನಯದ 'ಈಶ್ವರ್' ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಶಂಕರೇಗೌಡ ನಿರ್ಮಿಸಿರುವ ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದಾರೆ. ರಾಧಿಕಾ ಅವರ ಅಣ್ಣ ರವಿರಾಜ್ ಈ ಚಿತ್ರದ ವಿತರಕ. ಒಟ್ಟಿನಲ್ಲಿ ರಾಧಿಕಾ ಸುದ್ದಿ ಮಾಡದಿದ್ದರೂ, ಆಕೆಯ ಹೆಸರಿನಲ್ಲಿ ಯಾರಾದರೂ ಒಬ್ಬರು ಸುದ್ದಿ ಮಾಡುತ್ತಲೇ ಇರುತ್ತಾರೆ ಎಂಬುದಕ್ಕೆ ಇದೂ ಒಂದು ನಿದರ್ಶನ.
ಕೆಲವು ದಿನಗಳ ಹಿಂದೆ 'ಕೈ ವೆಂಕಟೇಶ' ಎಂಬ ಅಂಬರೀಷ್ ಅಭಿಮಾನಿ ತೆಂಗಿನ ಮರ ಹತ್ತಿ ಕುಳಿತಿದ್ದ. ಅಂಬರೀಷ್ ಬರುವವರೆಗೂ ಜಪ್ಪಯ್ಯ ಅಂದರೂ ಇಳಿಯಲ್ಲ ಎಂದು ಹಠ ಹಿಡಿದು ಕೂತಿದ್ದ. ವರನಟ ರಾಜ್ ಕುಮಾರ್ ಅವರಿಗೆ ಅಭಿಮಾನಿಗಳೆಂದರೆ ದೇವರು. ಹಾಗೆಯೇ 'ಸಾಹಸಸಿಂಹ' ವಿಷ್ಣುವರ್ಧನ್ ಅವರು ಅಭಿಮಾನಿಯೊಬ್ಬ ಕೊಟ್ಟ ಕೈಕಡಗವನ್ನು ಇನ್ನೂ ಬಿಚ್ಚಿಲ್ಲ. ಯಾರಿಗೆ ಗೊತ್ತು ವೆಂಕಟೇಶನಿಗೂ ರಾಧಿಕಾ ಅವರ ದರ್ಶನ ಭಾಗ್ಯ ಲಭಿಸಬಹುದೋ ಏನೋ!
(ದಟ್ಸ್ ಕನ್ನಡ ಚಿತ್ರವಾರ್ತೆ)