Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ವಾಮಿ ನಿತ್ಯಾನಂದ ಬಣ್ಣ ಬಯಲು ಮಾಡುವೆ: ಮದನ್
"ಸ್ವಾಮಿ ನಿತ್ಯಾನಂದ ಎಂದರೆ ಕೇವಲ ರಾಸಲೀಲೆಗಳಷ್ಟೇ ಅಲ್ಲ, ಆತ ಬಡಬಗ್ಗರ ಭೂಮಿಯನ್ನು ಕಬಳಿಸಿದ್ದಾನೆ. ಸಮಾಜದ ಉದ್ಧಾರಕ್ಕೆ ಶ್ರಮಿಸುತ್ತಿರುವ ನಿಜವಾದ ಸ್ವಾಮೀಜಿಗಳು ತಲೆ ತಗ್ಗಿಸುವಂತೆ ಮಾಡಿದ್ದಾನೆ . ಆತನ ಎಲ್ಲಾ ಲೀಲೆಗಳನ್ನು ಬಯಲು ಮಾಡುತ್ತೇನೆ. ಇದಕ್ಕೆ ಯಾರು ಅಡ್ಡಿಬಂದರೂ ಚಿತ್ರವನ್ನು ಕೈಬಿಡುವುದಿಲ್ಲ" ಎಂದು ನಟ, ನಿರ್ದೇಶಕ ಹಾಗೂ ನಿರ್ಮಾಪಕ ಮದನ್ ಪಟೇಲ್ ತಮ್ಮ ಹೊಸ ಚಿತ್ರವನ್ನು ಘೋಷಿಸಿದ್ದಾರೆ.
ಸ್ವಾಮಿ ನಿತ್ಯಾನಂದ ಕಥೆಯಾಧಾರಿತ ಚಿತ್ರದ ಜೊತೆಗೆ ಒಟ್ಟು ನಾಲ್ಕು ಚಿತ್ರಗಳನ್ನು ಪ್ರಕಟಿಸಿದ್ದಾರೆ ಮದನ್. ಮೂರು ಚಿತ್ರಗಳನ್ನು ನಿರ್ದೇಶಿಸುವ ಜವಾಬ್ದಾರಿಓಂ ಪ್ರಕಾಶ್, ದಯಾಳ್ ಪದ್ಮನಾಭನ್ ಹಾಗೂ ಈ ಎಂ ಗುರುಪ್ರಸಾದ್ (ಇವರು 'ಮಠ' ಗುರುಪ್ರಸಾದ್ ಅಲ್ಲ) ಅವರ ಹೆಗಲಿಗೆ ಹೊರಿಸಿದ್ದಾರೆ. ಮತ್ತೊಂದು ಚಿತ್ರಕ್ಕೆ ಸ್ವತಃ ಮದನ್ ಪಟೇಲ್ ಅವರೇ ಆಕ್ಷನ್, ಕಟ್ ಹೇಳಲಿದ್ದಾರೆ.
ಇನ್ನು ನಿತ್ಯಾನಂದನ ವಿಷಯಕ್ಕೆ ಬಂದರೆ, ಚಿತ್ರಕ್ಕೆ 'ಸತ್ಯಾನಂದ...ಎ ಟ್ರೂ ಸ್ಟೋರಿ ಆಫ್ ನಿತ್ಯಾನಂದ' ಎಂದು ಹೆಸರಿಡಲಾಗಿದೆ. ಬಿಜೆಪಿಯ ಸಕ್ರಿಯ ರಾಜಕಾರಣಿಯೂ ಆಗಿರುವ ಮದನ್ ಪಟೇಲ್ಗೆ ಪಕ್ಷದ ಕೆಲವು ರಾಜಕಾರಣಿಗಳು ಸತ್ಯಾನಂದ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರಂತೆ. ಆದರೂ ಈ ಚಿತ್ರವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ಮದನ್.
ಅಂದಹಾಗೆ ಸತ್ಯಾನಂದನ ಪಾತ್ರಕ್ಕೆ ಒಬ್ಬ ವ್ಯಕ್ತಿಯನ್ನು ಹುಡುಕಿದ್ದು, ಆತ ಥೇಟ್ ನಿತ್ಯಾನಂದನಂತೆಯೇ ಕಾಣಿಸಲಿದ್ದಾನೆ ಎಂದು ಮದನ್ ವಿವರ ನೀಡಿದ್ದಾರೆ. ಆತ ಯಾರು, ಏನು, ಎತ್ತ ಎಂದು ತಿಳಿಯಬೇಕಾದರೆ ಡಿಸೆಂಬರ್ 31ರ ತನಕ ಕಾಯಬೇಕು. ಕಾರಣ ಚಿತ್ರದ ಸಂಪೂರ್ಣ ವಿವರಗಳನ್ನು ಅಂದು ಬಿಡುಗಡೆ ಮಾಡುತ್ತಿರುವುದಾಗಿ ಮದನ್ ತಿಳಿಸಿದ್ದಾರೆ.
ಆದರೆ ಸದ್ಯಕ್ಕೆ ಸ್ವಾಮಿ ನಿತ್ಯಾನಂದ ಪ್ರಕರಣ ಕೋರ್ಟ್ನ ಕಟಕಟೆಯಲ್ಲಿದೆ. ಈ ಚಿತ್ರಕ್ಕೆ ಅನುಮತಿ ಸಿಗುತ್ತದೋ ಇಲ್ಲವೋ? ಚಿತ್ರದ ಶೀರ್ಷಿಕೆ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಏನನ್ನುತ್ತದೋ?ಶೀರ್ಷಿಕೆ ನೋಂದಾಯಿಸಿಕೊಳ್ಳಲು ಅನುಮತಿ ನೀಡುತ್ತದೋ ಇಲ್ಲವೋ ಎಂಬ ಪ್ರಶ್ನೆಗಳು ಸದ್ಯಕ್ಕೆ ಎದುರಾಗಿವೆ. ಇವೆಲ್ಲವೂ ಗೊತ್ತಾಗಲು ಡಿಸೆಂಬರ್ 31ರ ತನಕ ಕಾಯಲೇಬೇಕು. [ಸ್ವಾಮಿ ನಿತ್ಯಾನಂದ]