Don't Miss!
- News ಪಟ್ಟು ಬಿಡದೆ ನಾಮಪತ್ರ ಸಲ್ಲಿಸಿದ ಕೆಎಸ್ ಈಶ್ವರಪ್ಪಗೆ ಏಪ್ರಿಲ್ 22 ಡೆಡ್ ಲೈನ್!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ಗೆ ಭಾರತ ರತ್ನ; ಅಡ್ಡಗಾಲು ಹಾಕಿದ್ದ ವ್ಯಕ್ತಿ ಯಾರು?
ಭಾನುವಾರ (ಏ.24)ರಂದು ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಈ ನೆಪದಲ್ಲಿ ಅವರನ್ನು ನೆನೆಸಿಕೊಳ್ಳಲು, ಪರಸ್ಪರ ಸಂಭ್ರಮ ಸಡಗರಗಳನ್ನು ಹಂಚಿಕೊಳ್ಳಲು ಅಭಿಮಾನಿ ದೇವರುಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಕರ್ನಾಟಕ ರತ್ನ ಪುರಸ್ಕೃತ ರಾಜಣ್ಣನಿಗೆ ದೇಶದ ಅತ್ಯುನ್ನತ ಪುರಸ್ಕಾರ ಭಾರತರತ್ನ ನೀಡಬೇಕಾಗಿತ್ತು ಎಂಬ ಕೂಗು ಮುಂಚಿನಿಂದಲೂ ಕೇಳಿಬರುತ್ತಿದೆ. ಆದರೆ ರಾಜ್ಗೆ ಭಾರತ ರತ್ನ ನೀಡಲು ರಾಜ್ಯ ರಾಜಕಾರಣಿಯೊಬ್ಬ ಅಡ್ಡಗಾಲು ಹಾಕಿದ್ದರು ಎಂಬ ಅಂಶ ಈಗ ದಿಢೀರ್ ಎಂದು ಸ್ಫೋಟಗೊಂಡಿದೆ.
1990ರಲ್ಲೇ ರಾಜ್ ಅವರಿಗೆ ಭಾರತ ರತ್ನ ಸಿಗುವ ಸಾಧ್ಯತೆಗಳಿತ್ತು. ಅಂದಿನ ಪ್ರಧಾನಿ ವಿ ಪಿ ಸಿಂಗ್ ಅವರಿಗೆ ಪ್ರಶಸ್ತಿ ನೀಡುವ ಸಂಬಂಧ ಮನವಿ ಸಲ್ಲಿಸಲಾಗಿತ್ತು. ಪ್ರಧಾನಿ ಕಚೇರಿಯಿಂದಲೂ ಸಕಾರಾತ್ಮಕ ಸ್ಪಂದನೆಯೂ ಲಭ್ಯವಾಗಿತ್ತು.ಆದರೆ ರಾಜ್ಯ ರಾಜಕಾರಣಿಯೊಬ್ಬರು ಹಾಕಿದ ಅಡ್ಡಗಾಲಿನ ಕಾರಣ ಅಣ್ಣಾವ್ರಿಗೆ ಈ ಪುರಸ್ಕಾರ ಕೈತಪ್ಪಿತು ಎಂಬ ಮಾತುಗಳು ಕೇಳಿಬಂದಿವೆ.
ಈ ಗಂಭೀರ ಆರೋಪವನ್ನು ಮಾಡಿರುವವರು ಟಿಡಿಆರ್ ಹರಿಶ್ಚಂದ್ರಗೌಡ. ಆದರೆ ಆ ರಾಜಕಾರಣಿ ಯಾರು? ಯಾವ ಕ್ಷೇತ್ರದವರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.ರಾಜ್ ಹುಟ್ಟುಹಬ್ಬ ಸಮೀಪಿಸುತ್ತಿದ್ದಂತೆ ಹರಿಶ್ಚಂದ್ರಗೌಡ ಅವರು ಈ ಗಂಭೀರ ಆರೋಪ ಮಾಡಿ ಗಮನಸೆಳೆದಿದ್ದಾರೆ. ಅವರು ಆದಷ್ಟು ಬೇಗ ರಾಜಕಾರಣಿಯ ಹೆಸರನ್ನೂ ಬಹಿರಂಗಪಡಿಸಿದರೆ ಮತ್ತಷ್ಟು ಸತ್ಯಾಸತ್ಯತೆಗಳು ಹೊರಬೀಳುವ ಸಾಧ್ಯತೆಗಳಿವೆ.