ಕುಮಾರ್‌ ಗೋವಿಂದಾ ಆಲಾರೆ ಆಲಾ

By Staff

ಇದೇನು ಸಣ್ಣ ಬ್ರೇಕ್‌ ಅಲ್ಲ! ಸುಮಾರು ವರ್ಷಗಳ ಬಳಿಕ ನಟ-ನಿರ್ಮಾಪಕ ಕುಮಾರ್‌ಗೋವಿಂದ್‌, ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಚಿತ್ರ ನಿರ್ದೇಶನಕ್ಕೂ ಇಳಿದಿದ್ದಾರೆ.

‘ಶ್‌’ ಮತ್ತು ‘ಅನುರಾಗ ಸಂಗಮ’ ಖ್ಯಾತಿಯ ಕುಮಾರ್‌ ಗೋವಿಂದ್‌, ಈಗ ನಿರ್ಮಾಣ ಮಾಡುತ್ತಿರುವ ಚಿತ್ರದ ಹೆಸರು; ‘ಸತ್ಯ’. ಕಳೆದ ಹತ್ತುವರ್ಷಗಳಿಂದ ಬಣ್ಣದ ಬದುಕಿನಿಂದ ದೂರ ಉಳಿದಿದ್ದ ಅವರಿಗೆ ಯಾವ ಸತ್ಯಗಳು ಅರ್ಥವಾಗಿವೆಯೋ ಗೊತ್ತಿಲ್ಲ.

ಕಥೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ, ನಟನೆ ಸೇರಿದಂತೆ ‘ಸತ್ಯ’ ಚಿತ್ರದ ವಿವಿಧ ಹೊಣೆಗಳನ್ನು ಅವರು ಹೊತ್ತಿದ್ದಾರೆ. ಈ ಚಿತ್ರದ ಮೂಲಕ ಸಾಕಷ್ಟು ಹೊಸಬರಿಗೆ ಅವಕಾಶ ನೀಡುವ ರಿಸ್ಕನ್ನು ಸಹಾ ಅವರು ಬೆನ್ನಿಗೆ ಹಾಕಿಕೊಂಡಿದ್ದಾರೆ.

ಚಿತ್ತದ ಮೊದಲ ಹಂತದ ಚಿತ್ರೀಕರಣ ಕುಲುಮನಾಲಿ, ಆಗ್ರಾ, ರಾಜಾಸ್ತಾನ್‌, ಮುಂಬೈನಲ್ಲಿ ನಡೆದಿದೆ. ಹುಬ್ಬಳ್ಳಿ ಹುಡುಗಿ ಮಾಧುರಿ ನಾಯಕಿಯಾಗಿ ಈ ಚಿತ್ರದ ಮೂಲಕ ಬಣ್ಣದ ಬದುಕಿಗೆ ಪ್ರವೇಶ ಪಡೆದಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X