Don't Miss!
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೋಜಿಗದ ಹೂವೇ ನೋಡೇ... ನಾನು ಹಾಡುವೇನು ಕೇಳೇ!
ಕನ್ನಡದಲ್ಲಿ ನಾಯಕರೆಲ್ಲಾ ಗಾಯಕರಾಗುವುದು ಅತ್ಯಂತ ಹಳೆಯ ಸುದ್ದಿ. ಅಂದಿನ ಹೀರೋಗಳಾದ ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್ರಿಂದ ಹಿಡಿದು ಇಂದಿನ ಶಿವರಾಜ್ಕುಮಾರ್, ಜಗ್ಗೇಶ್, ಸುದೀಪ್ ಪುನೀತ್ ಮೊದಲಾದವರವರೆಗೂ ಈ ಪಟ್ಟಿ ಬೆಳೆಯುತ್ತದೆ.
ಇವರೆಲ್ಲ ತಮ್ಮ ತಮ್ಮ ಚಿತ್ರಗಳಲ್ಲಿ ಹಾಡಿ ಪ್ರಶಂಸೆಗೂ ಪಾತ್ರರಾದವರು. ಡಾ.ರಾಜ್ಕುಮಾರ್ ಅವರಂತೂ ಅಭಿನಯದಷ್ಟೇ ಖ್ಯಾತಿಯನ್ನು ಗಾಯನದಲ್ಲೂ ಪಡೆದವರು.
ಇದೇ ದಾರಿಯಲ್ಲಿ ಮತ್ತೊಬ್ಬ ನವತಾರೆ ವಿಜಯ ರಾಘವೇಂದ್ರ ಹೆಜ್ಜೆಹಾಕಿದ್ದಾರೆ. 'ಸೇವಂತಿ ಸೇವಂತಿ" ಚಿತ್ರದಲ್ಲಿ ಅವರು 'ಜಾಜಿ ಮಲ್ಲಿಗೆ ನೋಡೇ... ಸೋಜಿಗದ ಹೂವೇ ಕೇಳೇ..." ಎಂಬ ಗೀತೆಯನ್ನು ಹಾಡಿದ್ದಾರೆ. ಇವರ ಹಾಡಿಗೆ ಬಾಲಿವುಡ್ನ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಧ್ವನಿಗೂಡಿಸಿದ್ದಾರೆ.
ಅಂದ ಹಾಗೆ ಈ ಚಿತ್ರ ಜಾನಪದ ಸೊಗಡಿನದು. ಚಿತ್ರದಲ್ಲಿನ ಹಾಡುಗಳೆಲ್ಲ ಜಾನಪದ ಗೀತೆಗಳೇ ಆಗಿರುವುದು ಮತ್ತೊಂದು ವಿಶೇಷ.
ವಿಜಯ ರಾಘವೇಂದ್ರ ಬಾಲ ಕಲಾವಿದರಾಗಿ ಚಿತ್ರರಂಗ ಪ್ರವೇಶಿಸುವ ಮೊದಲೇ ಸಂಗೀತದ ಓನಾಮ ಕಲಿಯುತ್ತಿದ್ದರು. ಅವರ ದನಿ ಕೂಡ ಚನ್ನಾಗಿದೆ ಎಂದು ಆಗ ಡಾ.ರಾಜ್ ಸೇರಿದಂತೆ ಚಿತ್ರರಂಗದ ಪ್ರಮುಖರು ಬೆನ್ನುಚಪ್ಪರಿಸಿದ್ದರು. ತಂದೆ ಚಿನ್ನೇಗೌಡ ತಮ್ಮ ಮಗ ಗಾಯಕನಾಗಬೇಕೆಂದು ಆಸೆಪಟ್ಟವರು. ಇದೀಗ ನಿರ್ದೇಶಕ ಎಸ್.ನಾರಾಯಣ್ ಈ ಆಸೆಯನ್ನು 'ಸೇವಂತಿ ಸೇವಂತಿ" ಚಿತ್ರದಲ್ಲಿ ಈಡೇರಿಸಿದ್ದಾರೆ.