Don't Miss!
- News Namma Metro: 2023-24ರಲ್ಲಿ ಮೆಟ್ರೋ ವಾರ್ಷಿಕ ಆದಾಯದಲ್ಲಿ ಭಾರೀ ಏರಿಕೆ: ಖರ್ಚು-ಆದಾಯದ ಮಾಹಿತಿ?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಟೀವಿಗಾಗಿ ಹಂಸಲೇಖಾ ನಿರ್ಮಿಸಿರುವ ‘ಪ್ರೀತಿಗಾಗಿ’
'ಪ್ರೀತಿಗಾಗಿ" ಮುಂದೆ ಹೋಗಿದ್ದಕ್ಕೆ ಅಥವಾ ರದ್ದಾಗಿದ್ದಕ್ಕೆ ಅಧಿಕೃತ ಕಾರಣಗಳಿನ್ನೂ ಬಂದಿಲ್ಲ. ಕೃಷ್ಣಮಾಚಾರಿ ಶ್ರೀಕಾಂತರ ಹಿಂಸಾತ್ಮಕ ಧಾರಾವಾಹಿ 'ಗೌತಮಿ"ಗೆ ಅಮೋಘ ಮೂರನೇ ಬಾರಿ ವಿಸ್ತರಣೆ ಸಿಕ್ಕಿರುವುದೇ ಕಾರಣ ಅನ್ನಲಾಗುತ್ತಿದೆ. 'ಗೌತಮಿ"ಯ ಬಗ್ಗೆ ವೀಕ್ಷಕರಿಂದ ಹಿಡಿದು 'ಈಟೀವಿ"ಯ ಕಚೇರಿ ತನಕ ಎಲ್ಲರೂ ಕೋರಸ್ನಲ್ಲಿ ಡಬ್ಬಾ ಎಂಬ ಒಪೀನಿಯನ್ ಕೊಟ್ಟಿದ್ದರೂ, ಶ್ರೀಕಾಂತ್ಗೆ ಬಾಪಿನಾಯ್ಡು ಆಶೀರ್ವಾದವಿದೆ. ಬಾಪಿನಾಯ್ಡು ಅಂದರೆ ರಾಮೋಜಿರಾವ್ ಅವರ ಬಲಗೈ. ಹಾಗಾಗಿ 'ಗೌತಮಿ" ದೀಪದಾಸ್ ಗುಪ್ತನ ಥರ ಜಾಗ ಬಿಟ್ಟುಕೊಡ್ತಾ ಇಲ್ಲ.
ಇನ್ನೊಂದಡೆ ಸಿಹಿಕಹಿ ಚಂದ್ರು ಅವರ ಭರ್ಜರಿ ಇನ್ನಿಂಗ್ಸ್ ಮುಂದುವರೆದಿದೆ. ಪಾಪ ಪಾಂಡು ಬೆನ್ನಿಗೆ ಇನ್ನೊಂದು ಹಾಸ್ಯ ಧಾರಾವಾಹಿ 'ಯದ್ವಾತದ್ವಾ" ಶುರುವಾಗಿದೆ. ಸೀರಿಯಲ್ ಹೆಸರಿಗೆ ತಕ್ಕಂತೆಯೇ ಇದೆ ಅನ್ನುವ ವಿಮರ್ಶೆ ಬಂದಿದೆ. ಆದರೆ ಇದೂ ಕೂಡಾ ನೂರಾರು ಕಂತು ಪ್ರಸಾರವಾಗುವ ಅಪಾಯವಿದೆ. ಅದಕ್ಕೆ ಕಾರಣ ಇದರ ಹಿಂದಿರುವ ಸೂತ್ರಧಾರಿ ಸಿಹಿಕಹಿ. ಯದ್ವಾತದ್ವಾಕ್ಕೂ ನನಗೂ ಸಂಂಧವೇ ಇಲ್ಲ ಎಂದು ಸಿಹಿಕಹಿ ಊರೆಲ್ಲಾ ಡಂಗುರ ಹೊಡೆದಿರುವುದರಿಂದ ಇದು ಅವರದ್ದೇ ಅನ್ನೋದು ಖಾತ್ರಿಯಾಗಿದೆ.
ನಟ ಭಯಂಕರ ರವಿಕಿರಣ್ ಅವರಿಗೂ ಈಟೀವಿ ಕೃಪೆ ಮುಂದುವರೆದಿದೆ. 'ಬಾಂಧವ್ಯ" ಮುಗೀತಾ ಇದೆ ಅಂತ ವೀಕ್ಷಕರು ಸಂತೋಷ ಪಡುವ ಹೊತ್ತಿಗೆ ರವಿ 'ಸ್ಪಂದನ" ಎಂಬ ಮತ್ತೊಂದು ಮೆಗಾದ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಂತೂ ಉದಯ ಟೀವಿಗೆ ಈಟೀವಿ ಪೈಪೋಟಿ ನೀಡುತ್ತಿದೆ ಅನ್ನೋದು ನಿಜವಾಗಿದೆ.