Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿದಾನಂದ ಈಗ ‘ಅಯ್ಯೋ ಪಾಂಡು’!
- ದಟ್ಸ್ಕನ್ನಡ ಬ್ಯೂರೋ
ಚಿದಾನಂದನ ನಟನೆಯ ಗೀಳು ಹತ್ತಿಸಿದ ‘ಅಭಿನಯ ತರಂಗ’ದ ಎ.ಎಸ್.ಮೂರ್ತಿ ಚಿತ್ರದ ಸ್ಟಿಲ್ಲೊಂದನ್ನು ಅನಾವರಣಗೊಳಿಸುವ ಮೂಲಕ ತಮ್ಮ ಶಿಷ್ಯನ ನಾಯಕನಾಗುವ ಕನಸು ಸಾಕಾರಗೊಂಡಿತು.
ಬೆಂಗಳೂರಿನ ಮಲ್ಲೇಶ್ವರಂ ಅಸೋಸಿಯೇಷನ್ನಲ್ಲಿ ಆ.21, ಗುರುವಾರ ‘ಸಂಜೆ ಅಯ್ಯೋ ಪಾಂಡು’ವಿನದ್ದೇ ಮಾತು. ಇದು ಚಿದಾನಂದನ ಸಿನಿಮಾ ಟೈಟಲ್ಲು . ಇದಕ್ಕೂ‘ಪಾಪ ಪಾಂಡು’ವಿಗೂ ಏನೇನೂ ಸಂಬಂಧವಿಲ್ಲ ಅಂತ ಪದೇಪದೇ ಚಿದಾನಂದ ಹೇಳುತ್ತಿದ್ದರು. ಅಲ್ಲಿ ಪಾಪ ಪಾಂಡು ತಂಡದ ಬೇರೆ ಯಾರೊಬ್ಬರೂ ಇರದಿದ್ದುದು ಈ ಮಾತಿಗೆ ಪುಷ್ಟಿಯಾಗಿತ್ತು.
ಚಿದಾನಂದನನ್ನು ಹೀರೋ ಮಾಡುವ ಸಾಹಸಕ್ಕೆ ಕೈಹಾಕಿರುವವರು ಝೇಂಕಾರ್ ಆಡಿಯೋದ ನರೇಶ್ ಜೈನ್, ಬಾ.ಮ.ಹರೀಶ್ ಮತ್ತು ಹೊಸದಾಗಿ ನಿರ್ಮಾಪಕನಾಗುತ್ತಿರುವ ಉಮೇಶ್ ಬಣಕಾರ್. ಎಂ.ಎಸ್.ಶಿವುಗೆ ಇದು ಚೊಚ್ಚಲ ನಿರ್ದೇಶನದ ಹೊಣೆ. ಕೆಮರಾಮನ್ ನಾಗೇಶ್ಗೂ ಪ್ರಥಮ ಸಿನಿಮಾ ಯತ್ನ.
ಮಿರಮಿರ ಮಿಂಚುವ ರೆಗ್ಸಿನ್ ಬಟ್ಟೆಯ ಜುಬ್ಬ ಧರಿಸಿ ವಿಚಿತ್ರ ಆಕರ್ಷಣೆಯಾಗಿದ್ದ ಚಿದಾನಂದ್ ನಗು ಯಥಾ ಪ್ರಕಾರ ಬಹಳ ಅಗಲವಾಗಿತ್ತು. ಎ.ಎಸ್.ಮೂರ್ತಿ ಈ ನಗೆಯನ್ನು ‘ಗಾಂಧಿನಗರದಿಂದ ಮಲ್ಲೇಶ್ವರದಷ್ಟು ಉದ್ದ’ ಅಂತ ಚಟಾಕಿ ಹೊಡೆದದ್ದು ಚಿದಾನಂದನ ನಗುಮುಖವನ್ನು ಇನ್ನಷ್ಟು ದುಂಡಾಗಿಸಿತು.
‘ನನ್ನೊಳಗೊಬ್ಬ ನಟ ಇದ್ದಾನೆ ಅಂತ ನನಗೇ ಗೊತ್ತಿರಲಿಲ್ಲ. ನೀನೂ ನಟಿಸಬಲ್ಲೆ ಅಂತ ಹೇಳಿದ್ದೇ ಎ.ಎಸ್.ಮೂರ್ತಿ. ಆಮೇಲೆ ನಾಟಕ, ಧಾರಾವಾಹಿಗಳಲ್ಲಿ ಛಾನ್ಸ್ ಸಿಕ್ಕಿತು. ಪಾಪ ಪಾಂಡು ಮೂಲಕ ಸಿಹಿಕಹಿ ಚಂದ್ರು ಬ್ರೇಕ್ ಕೊಟ್ಟರು. ಇವತ್ತು ನಾಯಕನಾಗುವ ಕನಸು ಸಾಕಾರವಾಗುತ್ತಿದೆ’ ಅಂತ ಚಿದಾನಂದ ಚುಟುಕಾಗಿ ಹೇಳಿದರು.
ಬರುವ ಅಕ್ಟೋಬರ್ನಲ್ಲಿ ‘ಅಯ್ಯೋ ಪಾಪ’ ಚಿತ್ರೀಕರಣ ಶುರುವಾಗುತ್ತೆ. ಓಂಪ್ರಕಾಶ್ ರಾವ್ ನಾಯಕನಾಗಿದ್ದ ‘ಸಚ್ಚಿ’ ಚಿತ್ರದ ನಾಯಕಿ ನವ್ಯ ಚಿದಾನಂದನ ಮೊದಲ ಜೋಡಿ. ಇನ್ನೂ ಇಬ್ಬರು ನಾಯಕಿಯರಿಗೆ ತಲಾಷ್ ನಡೆದಿದೆ. ಸದ್ಯಕ್ಕೆ ಹೆಚ್ಚಿಗೆ ಕೆಲಸ ಇಲ್ಲದೆ ಇರುವ ಎಲ್.ಎನ್.ಶಾಸ್ತ್ರಿ ಉರುಫ್ ಚೈತನ್ಯ ಚಿದಾನಂದನ ಮೊದಲ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಆಫ್ಕೋರ್ಸ್ ಕಥೆ ತಮಾಷೆಯದ್ದು. ಅದೇನು ಅನ್ನೋದು ಸಸ್ಪೆನ್ಸ್ ಅಂತಾರೆ ಚಿದಾನಂದ.
ಸಹಾಯ
ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ಪತ್ರಕರ್ತ ಮನೋಹರ ತೋಳಹುಣಸೆ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸಿಕೊಡುವ ಸಲುವಾಗಿ ಸಿನಿಮಾ ಪತ್ರಕರ್ತರ ಸಂಘ ‘ಬಳಗ’ ಸ್ಥಾಪಿಸಿರುವ ಪರಿಹಾರ ನಿಧಿಗೆ ‘ಅಯ್ಯೋ ಪಾಂಡು’ ತಂಡ 5 ಸಾವಿರ ರುಪಾಯಿ ಹಣ ಕೊಟ್ಟಿತು.
ಮುಖಪುಟ / ಸ್ಯಾಂಡಲ್ವುಡ್