twitter
    For Quick Alerts
    ALLOW NOTIFICATIONS  
    For Daily Alerts

    ಕೈಮುರಿದು ಕೊಂಡ ‘ಶ್ರೀ’ ರಾಘವೇಂದ್ರ!

    By Staff
    |

    ‘ರಿಷಿ’ ಚಿತ್ರದ ನಂತರ ತೀವ್ರ ಕುತೂಹಲ ಕೆರಳಿಸಿರುವ ವಿಜಯರಾಘವೇಂದ್ರ ಅವರ ‘ಶ್ರೀ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. 45ದಿನಗಳ ಚಿತ್ರೀಕರಣ ಮುಗಿಸಿಕೊಂಡು ಚಿತ್ರತಂಡ ಬ್ಯಾಂಕಾಂಕ್‌ನಿಂದ ಬೆಂಗಳೂರಿಗೆ ಮರಳಿದೆ.

    ಬ್ಯಾಂಕಾಕ್‌ನ ಮುಆಯ್‌ ಥಾಯ್‌ ಎಂಬ ಕರಾಟೆ ಮಾದರಿಯ ಕಲೆ ಚಿತ್ರದ ವಿಶೇಷಗಳಲ್ಲಿ ಒಂದು. ಚಿತ್ರದ ಸಾಹಸ ದೃಶ್ಯಗಳಲ್ಲಿ ಡ್ಯೂಪ್‌ ಇಲ್ಲದೇ ನಟಿಸಿರುವ ವಿಜಯರಾಘವೇಂದ್ರರ ಭುಜಕ್ಕೆ ಪೆಟ್ಟಾಗಿದೆ. ಆದರೂ ಹಾಡಿನ ದೃಶ್ಯಗಳಲ್ಲಿ ನಟಿಸಿ ಸಹಕಾರ ನೀಡಿದ್ದಾರೆ ಎಂದು ಚಿತ್ರತಂಡ ಮೆಚ್ಚುಗೆ ವ್ಯಕ್ತಪಡಿಸಿದೆ.

    ಸಾಹಸ ದೃಶ್ಯ ಮತ್ತು ನಾಲ್ಕು ಹಾಡುಗಳ ಚಿತ್ರೀಕರಣದೊಂದಿಗೆ ಮೊದಲ ಹಂತದ ಚಿತ್ರೀಕರಣ ಬ್ಯಾಂಕಾಂಕ್‌ನಲ್ಲಿ ಮುಕ್ತಾಯಗೊಂಡಿದ್ದು, ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭಗೊಂಡಿದೆ.

    ನಿರ್ಮಾಪಕ ದುಶ್ಯಂತ್‌ ಮತ್ತು ನಿರ್ದೇಶಕ ಪ್ರಕಾಶ್‌ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಕ್ಯಾಲಿಫೋರ್ನಿಯಾ ನಿವಾಸಿ ಮೀರಾ ವರ್ಮಾ ಅವರ ಬೆಲ್ಲಿ ಡ್ಯಾನ್ಸ್‌ ಚಿತ್ರಕ್ಕೆ ಮೆರಗು ನೀಡಿದೆಯಂತೆ.

    Post your views

    ಇದನ್ನೂ ಓದಿ :
    ‘ಚಿನ್ನಾರಿ ಮುತ್ತ’ದಿಂದ ‘ಶ್ರೀ’ವರೆಗೆ

    ಮುಖಪುಟ / ಸ್ಯಾಂಡಲ್‌ವುಡ್‌

    Thursday, April 25, 2024, 22:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X