twitter
    For Quick Alerts
    ALLOW NOTIFICATIONS  
    For Daily Alerts

    ‘ಸಂಗೀತ ನಿಧಿ’ ಪಿ.ಬಿ.ಶ್ರೀನಿವಾಸ್‌ ಸಂದರ್ಶನ

    By ಎಸ್‌. ಜಗನ್ನಾಥರಾವ್‌ ಬಹುಳೆ
    |

    ಪಿ.ಬಿ.ಶ್ರೀನಿವಾಸ್‌ - ಕನ್ನಡಿಗರ ಮನೆಮನಗಳಲ್ಲಿ ಅಲಂಕೃತಗೊಂಡಿರುವ ಸಂಗೀತ ನಿಧಿ. ಇವರು ಗಾಯನ ಗಾರುಡಿಗರು. ಜತೆಗೆ , ಪರಭಾಷಾ ವಿಶಾರದರು. ಇವರಿಗೆ ಯಾವುದೇ ಭಾಷೆಯ, ಗಡಿಯ ಎಲ್ಲೆಯೇ ಇಲ್ಲ , ಒಂದೇ ಮಾತಿನಲ್ಲಿ ಹೇಳುವುದಾದರೆ ಅನಂತರೂಪಿ.

    ಅವರು ಮಾತನಾಡಿದರೆ ಸಾಕು, ಕವಿ ಹೃದಯ ಅರಳಿದಂತೆ, ಗಾನಸುಧೆ ಹರಿದಂತೆ , ಪಿಬಿಎಸ್‌ ಹಿಂದೊಮ್ಮೆ ಆಂಗ್ಲಭಾಷೆಯಲ್ಲಿ ಪತ್ರಕರ್ತರಾಗಿಯೂ ದುಡಿದಿದ್ದಾರೆ ಎಂಬುದು ಬಹಳ ಮಂದಿಗೆ ತಿಳಿದಿಲ್ಲ.

    ಈ ಬಹುಮುಖ ಸಾಧನಶೀಲರು ವಾಸವಿರುವುದು ಚೆನ್ನೈಯಲ್ಲಿ . ಹಾಡುವಂತೆ ಕರೆ ನೀಡಿದಾಗಲೆಲ್ಲ ಇವರು ಅತ್ಯುತ್ಸಾಹದಿಂದ ಬೆಂಗಳೂರಿಗೆ ಧಾವಿಸುತ್ತಾರೆ. ಹೀಗೆ ಇತ್ತೀಚೆಗೆ ಇವರು ನಗರಕ್ಕೆ ಬಂದಾಗ ಮಾತಿಗೆ ಸಿಕ್ಕಿದ್ದರು. ಇಂದು (ಸೆ.22) ಪಿ.ಬಿ.ಶ್ರೀನಿವಾಸ್‌ರ ಜನುಮದಿನ. ಈ ಸಂದರ್ಭದಲ್ಲಿ , ಅವರೊಡನೆ ನಡೆಸಿದ ಸಂದರ್ಶನದ ಸಾರ ಇಲ್ಲಿದೆ.

    ಬೆಂಗಳೂರಿನಲ್ಲಿ ಇಷ್ಟವಾದದ್ದು ಯಾವುದು?
    ಇಡೀ ಕರ್ನಾಟಕದ ಕೇಂದ್ರವಾದ ಬೆಂಗಳೂರು ನಗರ ಮತ್ತು ಅದರಲ್ಲಿನ ರಸಿಕ ಜನ.
    ಬೆಂಗಳೂರಿನಲ್ಲಿ ಮೆಚ್ಚಿನ ತಾಣ?
    ವಿಧಾನಸೌಧ
    ಬೆಂಗಳೂರಿನಲ್ಲಿ ಕುಳಿತು ನೋಡಿದ ಚಿತ್ರಗಳು?
    ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲ್‌, ಪ್ರೇಮಲೋಕ , ಪುಪ್ಪಕವಿಮಾನ.... ಇತ್ಯಾದಿ.
    ಬೆಂಗಳೂರಿನಲ್ಲಿ ಧ್ವನಿಮುದ್ರಿತವಾದ ಮರೆಯದ ಹಾಡು?
    ವಿರಾಮದ ನಂತರ ಹಾಡಿದ 'ಶ್ರೀಗಂಧ' ಚಿತ್ರದ ಅಂಧರಮ್ಮ ಅಂಧರು ....ಗೀತೆ.
    ಬೆಂಗಳೂರಿನಲ್ಲಿ ಅಂದು-ಇಂದು ?
    ಎಲ್ಲ ವಿಷಯಗಳಲ್ಲಿಯೂ ಪ್ರಗತಿ ಆಗಿದೆ. ಬಾಳಿನ ವೇಗ ಕೂಡ ಬೆಳೆದಿದೆ.
    ಬೆಂಗಳೂರು ಬೆಳವಣಿಗೆ ಬಗ್ಗೆ ಹೇಳಿ ?
    ಬೆಳವಣಿಗೆ ತಾನಾಗಿ ನಡೆದಿದೆ-ನಡೆಯುತ್ತದೆ. Every thing happens we are not the reasons.
    ಬೆಂಗಳೂರು-ಚೆನ್ನೈ ನಡುವೆ ನೀವು ಕಂಡ ಸಾಮ್ಯತೆ?
    ಈ ಎರಡೂ ನಗರಗಳು ಅದ್ಭುತವಾದ ರಸಜ್ಞತೆಯ ಕೇಂದ್ರಗಳು.
    ಬೆಂಗಳೂರಿನಲ್ಲಿ ಇದುವರೆಗೆ ನೀಡಿರುವ ಗಾಯನ ಕಾರ್ಯಕ್ರಮಗಳು ?
    ಲೆಕ್ಕ ಇಲ್ಲದಷ್ಟು , ಲೆಕ್ಕ ಇಡದಷ್ಟು.
    ಬೆಂಗಳೂರಿನಲ್ಲಿ ವೃತ್ತಿ ಜೀವನದ ವಿಶೇಷ ಅನುಭವ ?
    ಭಕ್ತಕುಂಬಾರ ಚಿತ್ರಕ್ಕೆ ಹಾಡುವ ಮುನ್ನ ರಾಜ್‌ರೊಂದಿಗೆ ನಡೆದ ಹೃದಯ ಸಂವಾದ.
    ಈ ನಗರದಲ್ಲಿನ ನಿಮ್ಮ ಮೆಚ್ಚಿನ ತಿಳಿಸು?
    ಅಂದು ಕೇಸರಿಬಾತ್‌.ಆ ಮೇಲೆ ಖಾಲಿ ದೋಸೆ, ಬಾಸುಂದಿ.
    ಕಪ್ಪು-ಬಿಳುಪು ಚಿತ್ರಗಳಲ್ಲಿ ಮತ್ತು ವರ್ಣದಲ್ಲಿ ಬೆಂಗಳೂರು ಕಂಡಾಗ ?
    ಸ್ವಾರಸ್ಯ ಬಣ್ಣದಲ್ಲಿಲ್ಲ. ಚಿತ್ರಗಳ ಪ್ರಾಶಸ್ತ್ಯದಲ್ಲಿದೆ. ಎರಡರಲ್ಲಿಯೂ ಬೆಂಗಳೂರಿನ ಕಾವ್ಯಗಳಿವೆ.
    ಬೆಂಗಳೂರಿಗೆ ನಿಮ್ಮ ಆಗಮನದ ಬಗ್ಗೆ ?
    ಇಲ್ಲಿಗೆ ಹೃದಯಪೂರ್ವಕವಾಗಿ ಬರುತ್ತೇನೆ. ಮತ್ತೆ ಮತ್ತೆ ಇಲ್ಲಿಗೆ ಬರಲು ದೇವರು ಅನುವು ಮಾಡಿ ಕೊಡಲಿ.
    ಇಲ್ಲಿನ ನಿವಾಸಿಗಳಿಗೆ ಕಿವಿ ಮಾತು?
    ಬೆಂಗಳೂರು ಕನ್ನಡಿಗರ ಕೈ ಗನ್ನಡಿ. ಸಂಗೀತದ ಅಲೆಗಳ ಮೇಲೆ ಸ್ವಚ್ಥ, ಸೌಂದರ್ಯ, ಸ್ವಾವಲಂಬಿ ಬೆಂಗಳೂರು ಶಾಶ್ವತವಾಗಿ ಉಳಿಯಲಿ.

    (ಸ್ನೇಹ ಸೇತು : ವಿಜಯ ಕರ್ನಾಟಕ )

    English summary
    An exclusive interview with P.B. Srinivas
    Sunday, September 22, 2013, 15:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X